Advertisement

ಬಸ್ರೂರು: ಬಸ್‌ ನಿಲ್ದಾಣದ ಸಮೀಪ ರಸ್ತೆಗೆ ರಸ್ತೆತಡೆ, ಬ್ಯಾರಿಕೇಡ್‌ ಅಳವಡಿಸಲು ಆಗ್ರಹ

01:10 AM May 20, 2019 | Sriram |

ಬಸ್ರೂರು: ಇಲ್ಲಿನ ಬಸ್‌ ನಿಲ್ದಾಣದ ಸಮೀಪ ಕುಂದಾಪುರ ಕಡೆಗೆ ಹೋಗುವ ದಾರಿಯಲ್ಲಿ ನೀರಿನ ಟ್ಯಾಂಕ್‌ ಹತ್ತಿರ ಅಗಲ ಕಿರಿದಾದ ರಸ್ತೆಯ ತಿರುವಿದ್ದು, ಅಪಘಾತಗಳಿಗೆ ಆಹ್ವಾನ ನೀಡುವಂತಿದೆ.

Advertisement

ಈ ಅಪಾಯಕಾರಿ ತಿರುವಿನಲ್ಲಿ ಈಗಾಗಲೇ ಹಲವು ಅಪಘಾತಗಳು ಸಂಭವಿಸಿದ್ದು, ಇಲ್ಲಿ ರಸ್ತೆತಡೆ ಅಥವಾ ಬ್ಯಾರಿಕೇಡ್‌ ಅನ್ನು ಅಳವಡಿಸುವ ಮೂಲಕ ಸವಾರರಿಗೆ ಎಚ್ಚರಿಕೆ ನೀಡಬೇಕಾಗಿದೆ.

ಕುಂದಾಪುರದಿಂದ ಶಿವಮೊಗ್ಗಕ್ಕೆ ಸಾಗುವ ಈ ರಾಜ್ಯ ಹೆದ್ದಾರಿಗೆ ಲೋಕೋಪಯೋಗಿ ಇಲಾಖೆ ಈ ಸಮಸ್ಯೆಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಇಲ್ಲವಾದಲ್ಲಿ ಮತ್ತಷ್ಟು ಆಪಘಾತಗಳು ಸಂಭವಿಸುವ ಆಪಾಯವಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಅಪಾಯಕಾರಿ
ಬಸ್ರೂರಿನ ಈ ತಿರುವು ಅತ್ಯಂತ ಅಪಾಯಕಾರಿಯಾಗಿದೆ. ಕುಂದಾಪುರ ಕಡೆಯಿಂದ ವೇಗವಾಗಿ ಬರುವ ವಾಹನಗಳು ಬಸೂÅರು ಕಡೆಯಿಂದ ಹೋಗುವವರಿಗೆ ಗೋಚರಿಸುತ್ತಿಲ್ಲ.ಇದರಿಂದ ಇಲ್ಲಿ ಈಗಾಗಲೇ ಇಲ್ಲಿ ಅನೇಕ ಅಪಘಾತಗಳು ಸಂಭವಿಸಿವೆ .ಆದಷ್ಟು ಶೀಘ್ರ ರಸ್ತೆಗೆ ತಡೆಬೇಲಿ ನಿರ್ಮಾಣ ಮಾಡಿದರೆ ಸಂಭವನೀಯ ದುರಂತ ತಪ್ಪುತ್ತದೆ.
-ರಾಮಕೃಷ್ಣ,
ಸ್ಥಳೀಯ ನಿವಾಸಿ

Advertisement
Advertisement

Udayavani is now on Telegram. Click here to join our channel and stay updated with the latest news.

Next