Advertisement

ಮರಣದಂಡನೆಗೊಳಗಾಗಿದ್ದ ಕೇರಳ ಮೂಲದ ವ್ಯಕ್ತಿಗೆ ಜೀವದಾನ ನೀಡಿದ ಉದ್ಯಮಿ

12:24 AM Jun 04, 2021 | Team Udayavani |

ಅಬುದಾಭಿ: ಯುಎಇಯ ಅಬಧಾಬಿಯಲ್ಲಿ ಮರಣದಂಡನೆಗೊಳಗಾಗಿದ್ದ ಕೇರಳಿಗ ಬೆಕ್ಸ್‌ ಕೃಷ್ಣನ್‌ ಅಕ್ಷರಶಃ ಜೀವದಾನ ಪಡೆದಿದ್ದಾರೆ!

Advertisement

ಅವರನ್ನು  ಖ್ಯಾತ ಉದ್ಯಮಿ, ಲುಲು ಗ್ರೂಪ್‌ ಮುಖ್ಯಸ್ಥ ಎಂ.ಎ.ಯೂಸುಫ್ ಅಲಿ 1 ಕೋಟಿ ರೂ. ಪರಿಹಾರ ನೀಡಿ ರಕ್ಷಿಸಿದ್ದಾರೆ. 2012ರಲ್ಲಿ ಅವರು ಬೇಕಾಬಿಟ್ಟಿ ಕಾರು ಚಲಾಯಿಸಿ ದ್ದರಿಂದ ಸೂಡಾನ್‌ನ  ಬಾಲಕ ಮೃತಪಟ್ಟಿದ್ದ.

ಈ ಹಿನ್ನೆಲೆಯಲ್ಲಿ ಅವರಿಗೆ ಯುಎಇ ಸುಪ್ರೀಂ ಕೋರ್ಟ್‌ ಮರಣದಂಡನೆ ವಿಧಿಸಿತ್ತು. ಕೃಷ್ಣನ್‌ ಕುಟುಂಬ ಅಲಿ ಅವರಿಗೆ ಸಮಸ್ಯೆ ವಿವರಿಸಿತು. ಬಾಲಕನ ಕುಟುಂಬವನ್ನು ಸುಡಾನ್‌ನಿಂದ ಕರೆಯಿಸಿಕೊಂಡು ಕುಟುಂಬಕ್ಕೆ ತಾವೇ 1 ಕೋಟಿ ರೂ. ಪರಿಹಾರಧನ ನೀಡಿದರು.

ಬಳಿಕ  ಕುಟುಂಬ ಕೃಷ್ಣನ್‌ರನ್ನು ಕ್ಷಮಿಸಲು ಒಪ್ಪಿತು. ಸುಪ್ರೀಂ ಕೋರ್ಟ್‌ ಕೂಡ ಕೃಷ್ಣನ್‌ ಅವರನ್ನು ಬಿಡುಗಡೆ ಮಾಡಿದೆ.  9 ವರ್ಷಗಳ ಅನಂತರ ಕೃಷ್ಣನ್‌ ಜೈಲಿನಿಂದ ಸದ್ಯದಲ್ಲೇ ಹೊರಬರಲಿದ್ದಾರೆ. ಒಮ್ಮೆ ಯೂಸುಫ್ ಅಲಿಯನ್ನು ನೋಡಿ, ಕೇರಳಕ್ಕೆ ಬರುವುದು ಕೃಷ್ಣನ್‌ ಅವರ ಮುಂದಿನ ಗುರಿ.

Advertisement

Udayavani is now on Telegram. Click here to join our channel and stay updated with the latest news.

Next