Advertisement

ಉತ್ತರಪ್ರದೇಶ: ಸಾಲ ವಸೂಲಿಗಾಗಿ 34 ಪ್ರಯಾಣಿಕರಿದ್ದ ಬಸ್ ಅಪಹರಣ, ಪೊಲೀಸರಿಂದ ತನಿಖೆ

11:41 AM Aug 19, 2020 | Nagendra Trasi |

ಲಕ್ನೋ: 34 ಪ್ರಯಾಣಿಕರಿದ್ದ ಬಸ್ ಅನ್ನು ಅಪರಿಚಿತ ದುಷ್ಕರ್ಮಿಗಳು ಅಪಹರಿಸಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ಬುಧವಾರ ಬೆಳಗ್ಗೆ ನಡೆದಿರುವುದಾಗಿ ವರದಿ ತಿಳಿಸಿದೆ.

Advertisement

ಬಸ್ ನೊಳಗೆ ನುಗ್ಗಿ ಬಂದ ದುಷ್ಕರ್ಮಿಗಳು ಚಾಲಕ ಮತ್ತು ಸಹಾಯಕನನ್ನು ಬಲವಂತವಾಗಿ ಬಸ್ ನಿಂದ ಕೆಳಗೆ ಇಳಿಸಿ, ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಬಸ್ ಅನ್ನು ಅಪಹರಿಸುವಾಗ 34 ಮಂದಿ ಪ್ರಯಾಣಿಕರಿದ್ದರು ಎಂದು ವರದಿ ಹೇಳಿದೆ.

ಬಸ್ ಹರ್ಯಾಣದ ಗುರುಗ್ರಾಮದಿಂದ ಹೊರಟು ಮಧ್ಯಪ್ರದೇಶಕ್ಕೆ ತೆರಳುತ್ತಿದ್ದಾಗ ಲಕ್ನೋ ಬೈಪಾಸ್ ಬಳಿ ಈ ಘಟನೆ ನಡೆದಿದೆ. ಮೂಲಗಳ ಪ್ರಕಾರ, ಈ ಕ್ರಿಮಿನಲ್ಸ್ ಗಳು ಫೈನಾನ್ಸ್ ಕಂಪನಿಯ ಉದ್ಯೋಗಿಗಳಂತೆ ನಟಿಸಿ ಬಸ್ ನಿಲ್ಲಿಸಿದ್ದರು ಎಂದು ತಿಳಿಸಿದೆ.

ಘಟನೆ ಬಗ್ಗೆ ಆಗ್ರಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೀ ನ್ಯೂಸ್ ಜತೆ ಮಾತನಾಡಿದ ಎಸ್ ಎಸ್ ಪಿ, ಬಸ್ ಅಪಹರಣಕಾರರು ಶ್ರೀರಾಮ್ ಫೈನಾನ್ಸ್ ಗೆ ಸೇರಿದ ವ್ಯಕ್ತಿಗಳಾಗಿದ್ದಾರೆ. ಅಲ್ಲದೇ ಬಸ್ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಸಾಲ ವಸೂಲಿಗಾಗಿ ಫೈನಾನ್ಸ್ ಕಂಪನಿ ಬಸ್ ಅಪಹರಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next