Advertisement

ತಮಿಳುನಾಡಿನಿಂದ ರಾಜ್ಯಕ್ಕೆ ಬಸ್‌ ಸಂಚಾರ ಆರಂಭ

03:12 PM Aug 24, 2021 | Team Udayavani |

ಹನೂರು: ತಮಿಳುನಾಡು ಸಾರಿಗೆ ಬಸ್ಸುಗಳು ಸಂಚಾರ ಆರಂಭಿಸಿದ್ದು ಕೆಲ ವಾಹನಗಳು ಸಂಚಾರ ನಡೆಸಿದರೆ ಕೆಲ ವಾಹನಗಳನ್ನು ಚೆಕ್‌ಪೋಸ್ಟ್‌ನಲ್ಲೇ ತಡೆದು ಹಿಂದಕ್ಕೆ ಕಳುಹಿಸಲಾಯಿತು.

Advertisement

ತಮಿಳುನಾಡಿನಿಂದ ಪಾಲಾರ್‌ ಮಹದೇಶ್ವರಬೆಟ್ಟ ಮಾರ್ಗವಾಗಿ ವಾಹನವೊಂದು ರಾಜ್ಯದತ್ತ ಆಗಮಿಸಿತ್ತು. ಈ ವೇಳೆ ಚೆಕ್‌ಪೋಸ್ಟ್‌ ಸಿಬ್ಬಂದಿ ಕಳೆದ 72 ಗಂಟೆಗಳ ಅವಧಿಯಲ್ಲಿ ಪಡೆದಿರುವಕೋವಿಡ್‌ ನೆಗೆಟಿವ್‌ ವರದಿ ಇರುವುದನ್ನು ಗಮನಿಸಿ ಪ್ರವೇಶ ನೀಡಿದರು.

ಇದನ್ನೂ ಓದಿ:ನನ್ನ ಮನವಿಯನ್ನು ಯಾರಿಗೆ ಹೇಳಬೇಕೋ ಅವರಿಗೆ ಹೇಳಿದ್ದೇನೆ: ಆನಂದ್ ಸಿಂಗ್

ಇನ್ನು ನಾಲಾರೋಡ್‌ ಚೆಕ್‌ಪೋಸ್ಟ್‌ ಕಡೆಯಿಂದ ಬಂದ ಬಸ್ಸಿನಲ್ಲಿದ್ದ ಚಾಲಕ, ನಿರ್ವಾಹಕನ ಬಳಿ ಕೋವಿಡ್‌ ನೆಗೆಟಿವ್‌ ವರದಿಯಿಲ್ಲದ ಹಿನ್ನೆಲೆ ಚೆಕ್‌ಪೋಸ್ಟ್‌ ನಲ್ಲಿಯೇ ತಡೆದು ವಾಪಸ್‌ ಕಳುಹಿಸಲಾಯಿತು. ಇನ್ನು ಮೈಸೂರು-ಕೊಳ್ಳೇಗಾಲ-ಹನೂರು- ಸತ್ತಿ ಮಾರ್ಗದ ಬಸ್‌ ಹನೂರು ಮಾರ್ಗವಾಗಿ ತಮಿಳುನಾಡಿನತ್ತ ತೆರಳಿತು.

Advertisement

Udayavani is now on Telegram. Click here to join our channel and stay updated with the latest news.

Next