Advertisement

ಬಸ್ರೂರು ಮಾರ್ಗವಾಗಿ ಸಂಚರಿಸದ ಬಸ್‌

10:31 PM May 15, 2020 | Sriram |

ಬಸ್ರೂರು: ಉಡುಪಿ ಜಿಲ್ಲೆ ಯೊಳಗೆ ಸೀಮಿತ ಬಸ್‌ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಆದರೆ ಕುಂದಾಪುರದಿಂದ ಬಸ್ರೂರು ಮಾರ್ಗವಾಗಿ ಸಿದ್ದಾಪುರ ಕಡೆಗೆ ಯಾವುದೇ ಬಸ್‌ ಸಂಚಾರ ಆರಂಭಿಸಿಲ್ಲ. ಇದರಿಂದ ಕೆಲ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

Advertisement

ಕುಂದಾಪುರ – ಉಡುಪಿ, ಬೈಂದೂರಿಗೆ ಕೆಲವು ಬಸ್‌ಗಳು ಸಂಚರಿಸಿದರೂ ಕುಂದಾಪುರದಿಂದ ಬಸ್ರೂರು ಕಂಡ್ಲೂರು ಮಾರ್ಗವಾಗಿ ಸಿದ್ದಾಪುರ ಕಡೆಗೆ ಯಾವುದೇ ಬಸ್‌ ಸಹ ಸಂಚರಿಸಲಿಲ್ಲ. ಈ ಮಾರ್ಗದಲ್ಲಿ ಖಾಸಗಿ ಬಸ್‌ಗಳೇ ಹೆಚ್ಚಿದ್ದು, ಮೂರು ಸರಕಾರಿ ಬಸ್‌ಗಳು ಹೊಸಂಗಡಿ, ಯಡಮೊಗೆ – ಜಡ್ಡಿನಗದ್ದೆಗೆ ಸಂಚರಿಸುತ್ತಿತ್ತು. ಆದರೆ ಸರಕಾರಿ ಬಸ್‌ಗಳು ಸಂಚರಿಸಲಿಲ್ಲ. ಕುಂದಾಪುರದ ಕಚೇರಿ ಮತ್ತಿತರ ಕೆಲಸಗಳಿಗೆ ಪ್ರತಿ ನಿತ್ಯ ಸಂಚರಿಸುವವರಿಗೆ ಇದರಿಂದ ಅನಾನುಕೂಲವಾಗಿದೆ. ರಸ್ತೆಯಲ್ಲಿ ಖಾಸಗಿ ಕಾರು, ರಿಕ್ಷಾ ಮತ್ತು ದ್ವಿಚಕ್ರ ವಾಹನಗಳಷ್ಟೇ ಸಂಚರಿಸುತ್ತಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next