Advertisement

Bantwal: ಬಸ್ಸು-ಸ್ಕೂಟರ್‌ ಢಿಕ್ಕಿ; ಸವಾರ ಸಾವು

12:07 AM Dec 08, 2023 | Team Udayavani |

ಬಂಟ್ವಾಳ: ಬಿ.ಸಿ.ರೋಡು- ಪೊಳಲಿ ರಸ್ತೆಯ ಪಲ್ಲಮಜಲು ಕ್ರಾಸ್‌ ಬಳಿ ಖಾಸಗಿ ಬಸ್ಸು ಹಾಗೂ ಸ್ಕೂಟರ್‌ ಢಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಡಿ. 6ರ ರಾತ್ರಿ ನಡೆದಿದೆ.
ಸ್ಕೂಟರ್‌ ಸವಾರ ನಾರಾಯಣ (42) ಅವರು ಮೃತಪಟ್ಟವರು. ಬಸ್ಸು ಢಿಕ್ಕಿಯಾದ ರಭಸಕ್ಕೆ ಸವಾರ ಸ್ಕೂಟರ್‌ ಸಹಿತ ರಸ್ತೆಗೆ ಎಸೆಯಲ್ಪಟ್ಟು ಗಂಭಿರ ಗಾಯಗೊಂಡಿದ್ದು, ತತ್‌ಕ್ಷಣ ಅವರನ್ನು ತುಂಬೆ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಪರೀಕ್ಷಿಸಿ ಚಿಕಿತ್ಸೆ ನೀಡಿದ ವೈದ್ಯರು ರಾತ್ರಿ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

Advertisement

ಬಸ್ಸು ಬಿ.ಸಿ .ರೋಡು ಕಡೆಗೆ ಆಗಮಿಸುತ್ತಿದ್ದು, ನಾರಾಯಣ ಅವರು ಪೊಳಲಿ ಕಡೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಘಟನೆಯ ಕುರಿತು ಅಮ್ರಾಡಿ ಗ್ರಾಮದ ನವನೀತ್‌ ಪೊಲೀಸರಿಗೆ ದೂರು ನೀಡಿದ್ದು, ಬಸ್ಸು ಚಾಲಕ ಮುನೀರ್‌ ಅವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ತೀರಾ ಬಲ ಬದಿಗೆ ಚಲಾಯಿಸಿ ಸ್ಕೂಟರ್‌ಗೆ ಎದುರಿನಿಂದ ಢಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next