Advertisement

ನಿರ್ವಾಹಕನನ್ನು ಮರೆತ ಬಸ್‌ ಚಾಲಕ!

09:57 AM Jun 25, 2019 | keerthan |

ಬೆಳ್ಳಾರೆ: ಕೆಎಸ್ಸಾರ್ಟಿಸಿ ಬಸ್‌ ಒಂದರ ಚಾಲಕ ನಿರ್ವಾಹಕನನ್ನೇ ಮರೆತು ಮುಂದಕ್ಕೆ ಚಲಾಯಿಸಿದ ಪ್ರಸಂಗವೊಂದು ಸೋಮವಾರ ಬೆಳಗ್ಗೆ ಪಟ್ಟಣದಲ್ಲಿ ನಡೆದಿದೆ.

Advertisement

ಬೆಳ್ಳಾರೆ-ನಿಂತಿಕಲ್ಲು ಮಾರ್ಗವಾಗಿ ಬೆಳ್ಳಾರೆ ಬಸ್‌ ನಿಲ್ದಾಣದಿಂದ ಬೆಳಗ್ಗೆ 9.30ಕ್ಕೆ ಹೊರಟಿದ್ದ ಬಸ್ಸಿನ ಚಾಲಕ ತನ್ನ ನಿರ್ವಾಹಕ ಏರುವ ಮೊದಲೇ ಮುಂದಕ್ಕೆ ಚಲಾಯಿಸಿದ್ದ. ನಿರ್ವಾಹಕ ನಿಲ್ದಾಣದಿಂದ ಹೊರಹೋಗುತ್ತಿದ್ದ ಬಸ್‌ ಬೆಂಬತ್ತಿದರೂ ಬಸ್‌ ದೂರ ಸಾಗಿಯಾಗಿತ್ತು. ಬೆಳ್ಳಾರೆ ಕೆಳಗಿನ ಪೇಟೆಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಚಾಲಕ ಬಸ್‌ ನಿಲ್ಲಿಸಿದ್ದರೂ ನಿರ್ವಾಹಕ ಇಲ್ಲ ಎಂಬ ಅಂಶ ಗಮನಕ್ಕೆ ಬಂದಿರಲಿಲ್ಲ.

ನಿರ್ವಾಹಕ ಕೊನೆಗೆ ಬೈಕ್‌ ಸವಾರರೊಬ್ಬರ ಸಹಾಯದಿಂದ ಲಕ್ಷ್ಮೀ ನಾರಾಯಣ ದೇವಸ್ಥಾನದ ಬಳಿ ಸೀಟಿ ಊದಿದರು. ಸೀಟಿ ಸದ್ದಿಗೆ ಎಚ್ಚೆತ್ತ ಚಾಲಕ, ನಿರ್ವಾಹಕ ಬಸ್‌ನಲ್ಲಿಲ್ಲ; ಬೈಕ್‌ನಲ್ಲಿ ಹಿಂಬಾಲಿಸುತ್ತಿದ್ದಾರೆ ಎಂದು ಅರಿತು ಬಸ್‌ ನಿಲ್ಲಿಸಿ ಹತ್ತಿಸಿಕೊಂಡರು. ಮೇ 8ರಂದು ಧರ್ಮಸ್ಥಳ-ಮಂಗಳೂರು ಬಸ್‌ನಲ್ಲಿಯೂ ಇದೇ ತರಹದ ಪ್ರಸಂಗ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next