Advertisement

ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಬಸ್ ಚಾಲಕ ಆತ್ಮಹತ್ಯೆ!

02:10 PM Dec 27, 2020 | keerthan |

ಬೀದರ: ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಈಶಾನ್ಯ ಸಾರಿಗೆ ಸಂಸ್ಥೆ ಬಸ್ ಚಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ರವಿವಾರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.

Advertisement

ಗೊಂಗರಗಾಂವ್ ಗ್ರಾಮದ ಓಂಕಾರ ಬಸಪ್ಪಾ ಮ್ಯಾಕ್ರೆ (ಚಾಲಕ ಸಂ- 1079) ಆತ್ಮಹತ್ಯೆ ಮಾಡಿ ಕೊಂಡಿರುವ ಚಾಲಕ. ಗ್ರಾಮ ಪಂಚಾಯತಿ ಚುನಾವಣೆ ಹಿನ್ನಲೆಯಲ್ಲಿ ಕೋಸಂ ಗ್ರಾಮಕ್ಕೆ ನಿಯೋಜನೆ ಮಾಡಲಾಗಿತ್ತು. ಶನಿವಾರ ರಾತ್ರಿ ಚುನಾವಣಾ ಸಿಬ್ಬಂದಿ ಮತ್ತು ಇವಿಎಂ ಯಂತ್ರಗಳನ್ನು ಸಾಗಿಸಿದ್ದ ಚಾಲಕ ಓಂಕಾರ, ಬಸ್ ಗ್ರಾಮದಲ್ಲೆ ಬಿಟ್ಟು ಬೀದರನ ಬಸ್ ನಿಲ್ದಾಣ ಘಟಕ 2ಕ್ಕೆ ಮಧ್ಯರಾತ್ರಿ ವಾಪಸ್ಸಾಗಿ ವಿಶ್ರಾಂತಿ ಕೋಣೆಗೆ ತೆರಳಿದ್ದರು.

ಇದನ್ನೂ ಓದಿ:ಚಿಹ್ನೆ ಅದಲು-ಬದಲು: ಕಲಾದಗಿ ಗ್ರಾ.ಪಂ ಮತದಾನ ರದ್ದು, 29ಕ್ಕೆ ಮರು ಮತದಾನ

ಬೆಳಿಗ್ಗೆ ಸಾರಿಗೆ ಸಿಬ್ಬಂದಿಗಳು ಕೋಣೆಗೆ ತೆರಳಿದಾಗ ಚಾಲಕ ಓಂಕಾರ್ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಓಂಕಾರ್ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಘಟನೆ ಕುರಿತಂತೆ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next