Advertisement

ಚಲಿಸುತ್ತಿದ್ದ ಬಸ್ ಗೆ ವಿದ್ಯುತ್ ತಂತಿ ಸ್ಪರ್ಷ: ಆರು ಜನರ ದುರ್ಮರಣ, 19 ಜನರಿಗೆ ಗಾಯ

09:28 AM Jan 17, 2021 | Team Udayavani |

ಜಲೋರ್ ( ರಾಜಸ್ಥಾನ): ಖಾಸಗಿ ಬಸ್ ಗೆ ವಿದ್ಯುತ್ ತಂತಿ ಸ್ಪರ್ಷವಾಗಿ ಬೆಂಕಿ ಕಾಣಿಸಿಕೊಂಡು ಆರು ಮಂದಿ ಪ್ರಯಾಣಿಕರು ಸಾವನ್ನಪ್ಪಿ 19 ಜನರು ಗಾಯಗೊಂಡ ಘಟನೆ ಶನಿವಾರ ತಡರಾತ್ರಿ ರಾಜಸ್ಥಾನದ ಜಲೋರ್ ನಲ್ಲಿ ನಡೆದಿದೆ.

Advertisement

ಈ ಖಾಸಗಿ ಬಸ್ ಮಂದೋರ್ ನಿಂದ ಬೀವರ್ ಗೆ ಚಲಿಸುತ್ತಿತ್ತು. ಆದರೆ ಬಸ್ ಚಾಲಕ ತಪ್ಪಾಗಿ ಮಹೇಶ್ ಪುರ ಗ್ರಾಮದ ಕಡೆಗೆ ಬಸ್ ಚಲಾಯಿಸಿದ್ದ. ಈ ವೇಳೆ ಬಸ್ ಗೆ ವಿದ್ಯುತ್ ತಂತಿಯ ಸ್ಪರ್ಷವಾಗಿದ್ದು, ಬಸ್ ಗೆ ಬೆಂಕಿ ಹತ್ತಿಕೊಂಡಿದೆ.

ಘಟನೆಯಲ್ಲಿ ಆರು ಮಂದಿ ಸಜೀವ ದಹನವಾಗಿದ್ದು, 19 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜೋಧಪುರ ಮತ್ತು ಜಲೋರ್ ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:ಛಾಯಾ ಬ್ಯಾಂಕ್‌ಗಳಿಗೂ ಇನ್ನು ಕಠಿನ ನಿಯಮ: ಆರ್‌ಬಿಐ

ಆರು ಮಂದಿ ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಜೋಧಪುರಕ್ಕೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಉಳಿದ 13 ಮಂದಿ ಗಾಯಾಳುಗಳಿಗೆ ಜಲೋರ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next