Advertisement

ಬಸ್‌ ಭಸ್ಮ:ಚಾಲಕನ ಸಮಯಪ್ರಜ್ಞೆ; 32 ಪ್ರಯಾಣಿಕರು ಸೇಫ್! 

09:32 AM Apr 21, 2018 | Team Udayavani |

ಕೊಪ್ಪಳ : ಚಾಲಕನ ಸಮಯಪ್ರಜ್ಞೆಯಿಂದ ಶನಿವಾರ ಬೆಳ್ಳಂಬೆಳಗ್ಗೆ ನಡೆಯಬೇಕಾಗಿದ್ದ ಭಾರೀ ದುರಂತವೊಂದು ಅದೃಷ್ಟವಷಾತ್‌ ತಪ್ಪಿಹೋಗಿದೆ. 

Advertisement

ಯಲಬುರ್ಗಾದ ಗುನ್ನಾಳ ಬಳಿ ಹೆದ್ದಾರಿಯಲ್ಲಿ ಬೆಂಗಳೂರಿನಿಂದ ವಿಜಯಪುರಕ್ಕೆ ತೆರಳುತ್ತಿದ್ದ ಖಾಸಗಿ  ಬಸ್ಸೊಂದು ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ  ಸುಟ್ಟು ಕರಕಲಾಗಿದೆ. ಅದೃಷ್ಟವಷಾತ್‌ ಬಸ್‌ನಲ್ಲಿದ್ದ 32 ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಬೆಳಗಿನ ಜಾವ 5.30 ರ ವೇಳಗೆ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿದ ಚಾಲಕ ಪ್ರಯಾಣಿಕರಿಗೆ ಕೆಳಗಿಳಿಯುವಂತೆ ಸೂಚಿಸಿದ್ದಾರೆ. ಎಲ್ಲಾ ಪ್ರಯಾಣಿಕರು ತಕ್ಷಣ ಲಗೇಜ್‌ಗಳ ಸಮೇತ ಕೆಳಗಿಳಿದು ಬಚಾವ್‌ ಆಗಿದ್ದಾರೆ. 

ಸ್ಥಳಕ್ಕೆ ಅಗ್ನಿ ಶಾಮಕ ದಳದ ವಾಹನ ಆಗಮಿಸುವಷ್ಟರಲ್ಲಿ ಬಸ್‌ ಸಂಪೂರ್ಣ ಸುಟ್ಟು ಹೋಗಿದ್ದು, ಬೆಂಕಿಯನ್ನು ನಂದಿಸಲಾಗಿದೆ. 

ಬೇವೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next