Advertisement

ಬಸ್‌- ಬೈಕ್‌ ಢಿಕ್ಕಿ: ಉಪಪ್ರಾಂಶುಪಾಲ ಸಾವು

11:26 AM Jan 17, 2018 | Team Udayavani |

ಬೈಂದೂರು: ಬಸ್‌ ಹಾಗೂ ಬೈಕ್‌ ಢಿಕ್ಕಿಯಾಗಿ ಬೈಕ್‌ ಸವಾರ, ಬೈಂದೂರಿನ ಸೈಂಟ್‌ ಧಾಮಸ್‌ ಕಾಲೇಜಿನ ಉಪಪ್ರಾಂಶುಪಾಲ ಫಾದರ್‌ ಅಬ್ರಹಾಂ ಕಲ್ಲಪಟ್‌ (38) ಧಾರುಣವಾಗಿ ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ಬೈಂದೂರಿನ ಹೊಸ ಬಸ್‌ ನಿಲ್ದಾಣ ಬಳಿ ಸಂಭವಿಸಿದೆ. 

Advertisement

ಆಸ್ಪತ್ರೆಗೆ ಹೊರಟಿದ್ದ ಅಬ್ರಹಾಂ: ಅಬ್ರಹಾಂ ಅವರು ಕೇರಳ ಮೂಲದವರಾಗಿದ್ದು, ನಾಲ್ಕು ವರ್ಷಗಳಿಂದ ಬೈಂದೂರಿನ ಸೈಂಟ್‌ ಥಾಮಸ್‌ ಕಾಲೇಜಿನಲ್ಲಿಉಪ ಪ್ರಾಂಶುಪಾಲರಾಗಿದ್ದರು. ವಸತಿ ಕಾಲೇಜು ಆಗಿದ್ದರಿಂದ ರಾತ್ರಿ ಹನ್ನೊಂದು ಗಂಟೆಯ ವೇಳೆಗೆ ಅವರು ಅನಾರೋಗ್ಯಗೊಂಡ ವಿದ್ಯಾರ್ಥಿಯನ್ನು ಬೈಕ್‌ನಲ್ಲಿ ಕುಳ್ಳಿರಿಸಿಕೊಂಡು ಬೈಂದೂರಿನ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆಗೆ ಕುಂದಾಪುರದಿಂದ ಬೆಳಗಾಂ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್‌ ಢಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಅಬ್ರಹಾಂ ಅವರ ತಲೆಗೆ ಬಲವಾದ ಏಟು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾರೆ. 

ಬೈಕ್‌ನಲ್ಲಿದ್ದ ವಿದ್ಯಾರ್ಥಿ ಗಾಯಗೊಂಡಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಲೇಜಿಗೆ ರಜೆ
ಅಬ್ರಹಾಂ ಸಾವಿಗೆ ಸಂಸ್ಥೆಯ ಆಡಳಿತ ಮಂಡಳಿ, ಉಪನ್ಯಾಸಕ ವೃಂದ, ಸಿಬಂದಿ ವರ್ಗ, ವಿದ್ಯಾರ್ಥಿ ಗಳು ಕಂಬನಿ ಮಿಡಿದಿದ್ದು, ಮಂಗಳವಾರ ಕಾಲೇಜಿಗೆ ರಜೆ ಸಾರಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next