Advertisement

ಸಾರಿಗೆ ನೌಕರರ ಮುಷ್ಕರ: ಹುಣಸೂರಿನಲ್ಲಿ ಬೆರಳೆಣಿಕೆಯಷ್ಟು ಬಸ್ ಗಳ ಓಡಾಟ

01:03 PM Dec 11, 2020 | keerthan |

ಹುಣಸೂರು: ರಾಜ್ಯ ಸಾರಿಗೆ ಸಂಸ್ಥೆ ನೌಕರರ ಸಂಘವು ಕರೆ ನೀಡಿರುವ ಮುಷ್ಕರದ ಹಿನ್ನೆಲೆಯಲ್ಲಿ ಹುಣಸೂರಿನಲ್ಲಿ ಬೆರಳೆಣಿಕೆಯಷ್ಟು ಬಸ್ ಗಳು ಮಾತ್ರ ಸಂಚರಿಸುತ್ತಿವೆ.

Advertisement

ಹುಣಸೂರು ನಗರವು ಮೈಸೂರು- ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದು, ಕೇರಳ, ಮಡಿಕೇರಿ, ಮಂಗಳೂರು ಕಡೆಯಿಂದ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಬಸ್ ಗಳು ಓಡಾಡುತ್ತವೆ.

ಇದನ್ನೂ ಓದಿ:ಮಂಗಳೂರು- ಮೈಸೂರು ವಿಮಾನಯಾನ ಆರಂಭ: ಮಂಗಳೂರಿಗೆ ಬಂದಿಳಿದ ಮೊದಲ ವಿಮಾನ

ಪ್ರತಿಭಟನೆ ಹಿನ್ನೆಲೆಯಲ್ಲಿ ಹೆಚ್ಚಿನ ಬಸ್ ಗಳು ಬರದೆ ಪ್ರಯಾಣಿಕರು ಪರದಾಡುವಂತಾಗಿದೆ. ಹುಣಸೂರು ಡಿಪೋದಲ್ಲಿ 115 ಬಸ್ ಗಳಿದ್ದು, ಈ ಪೈಕಿ ಡಿಪೋದಿಂದ ರತ್ನಪುರಿ, ಎಚ್ ಡಿ ಕೋಟೆ, ಕೆ.ಆರ್ ನಗರ ಗಳಿಗೆ 15 ಬಸ್ ಗಳು ಮಾತ್ರ ಪ್ರಯಾಣ ಬೆಳೆಸಿದೆ.

ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಪ್ರತಿಭಟನೆಯಿಂದಾಗಿ ಕೆಲಸಕ್ಕೆ ಹೋಗುವ ಪ್ರಯಾಣಿಕರು ಖಾಸಗಿ ವಾಹನ ಅವಲಂಬಿಸುವಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next