Advertisement

ತಲಪಾಡಿ ಖಾಸಗಿ ಬಸ್ ಢಿಕ್ಕಿ ಯುವಕ ಗಂಭೀರ

09:51 AM Feb 12, 2020 | sudhir |

ಉಳ್ಳಾಲ: ತಲಪಾಡಿ ಟೋಲ್ ಗೇಟ್ ಸಮೀಪ ಖಾಸಗಿ ಬಸ್ ಢಿಕ್ಕಿ ಹೊಡೆದು ಪಾದಚಾರಿ ಯುವಕ ಗಂಭೀರ ಗಾಯಗೊಂಡಿರುವ ಘಟನೆ ಮಂಗಳವಾರ ತಡರಾತ್ರಿ ವೇಳೆ ಸಂಭವಿಸಿದೆ.

Advertisement

ಗಾಯಾಳು ಯುವಕನನ್ನು ಬೆಳಗಾವಿ ಮೂಲದ ಕಿರಣ್ ರಾಥೋಡ್ (22) ಎಂದು ಗುರುತಿಸಲಾಗಿದೆ.

ಟೋಲ್ ಗೇಟ್ ಸಮೀಪ ಅಡ್ಡದಾಟುತ್ತಿದ್ದ ಯುವಕನಿಗೆ ಖಾಸಗಿ ಸಿಟಿ ಬಸ್  ಢಿಕ್ಕಿ ಹೊಡೆದಿದೆ. ತಲೆಗೆ ಗಂಭೀರವಾಗಿ ಗಾಯಗೊಂಡ ಯುವಕನನ್ನು ತಕ್ಷಣ ಟೋಲ್ ಗೇಟ್ ನ ಆಂಬ್ಯುಲೆನ್ಸ್ ಮೂಲಕ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು, ಮಂಗಳೂರು ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next