Advertisement

ಸುಟ್ಟು ಕರಕಲಾದ ಬಸ್‌

11:20 PM Sep 14, 2019 | Lakshmi GovindaRaju |

ತುಮಕೂರು: ಹೊರವಲಯದ ಊರುಕೆರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಜಯಪುರದಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಶನಿವಾರ ಬೆಳಗಿನ ಜಾವ ಇದ್ದಕ್ಕಿದ್ದ ಹಾಗೆ ಬೆಂಕಿ ಕಾಣಿಸಿಕೊಂಡು ಬಸ್‌ ಸಂಪೂರ್ಣ ಸುಟ್ಟುಕರಕಲಾಗಿದೆ. ಬಸ್‌ನಲ್ಲಿದ್ದ ಆರು ಮಂದಿಗೆ ತೀವ್ರ ಗಾಯಗಳಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ.

Advertisement

ರಾಷ್ಟ್ರೀಯ ಹೆದ್ದಾರಿ 48ರ ಊರುಕೆರೆ ಫ್ಲೈ ಓವರ್‌ ಮೇಲೆ ಬಸ್‌ ಬರುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಬಸ್ಸಿನಿಂದ ಜಿಗಿದದಿದ್ದರಿಂದ ಕೆಲವರ ಕೈ, ಕಾಲು ಮುರಿದಿವೆ. ಪ್ರಕಾಶ್‌ (31), ತಾಳಿಕೋಟೆಯ ತೌಸಿಫ್(21), ಮೆಹಬೂಬ್‌ ಪಾಷಾ (25), ಶಬ್ಬೀರ್‌(27) ಹಾಗೂ ಕೆಂಬಾವಿಯ ಅಭಿ ಗಾಯಗೊಂಡವರು.

ವಿಜಯಪುರದ ನೀಲಮ್ಮ ಎಂಬಾಕೆಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಸಿದ್ಧಗಂಗಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲ ಪ್ರಯಾಣಿಕರ ಬ್ಯಾಗ್‌ ಸಮೇತ ಮೊಬೈಲ್‌ಗ‌ಳು ಸುಟ್ಟು ಕರಕಲಾಗಿವೆ. ಚಾಲಕ ಪರಾರಿಯಾಗಿದ್ದಾನೆ. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next