Advertisement

ಬಿಹಾರ ಸಿಎಂ ನಿತೀಶ್‌ ಕುಮಾರ್‌ ರಾಜೀನಾಮೆಗೆ ಆರ್‌ಜೆಡಿ ಆಗ್ರಹ

04:13 PM Mar 15, 2018 | udayavani editorial |

ಪಟ್ನಾ : ಬಿಹಾರ ವಿಧಾನಸಭಾ ಉಪಚುನಾವಣೆಗಳಲ್ಲಿ ಸಾಧಿಸಿದ ವಿಜಯದಿಂದ ಉತ್ತೇಜಿತವಾಗಿರುವ ಲಾಲು ಪ್ರಸಾದ್‌ ನೇತೃತ್ವದ ಆರ್‌ಜೆಡಿ ಪಕ್ಷದ ಶಾಸಕರು ಇಂದು ರಾಜ್ಯ ವಿಧಾನಸಭೆಯ ಹೊರಗೆ ಭಾರೀ ಪ್ರದರ್ಶನ ನಡೆಸಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ರಾಜೀನಾಮೆಯನ್ನು ಆಗ್ರಹಿಸಿದರು. 

Advertisement

ಅರಾರಿಯಾ ಮತ್ತು ಜೆಹಾನಾಬಾದ್‌ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆರ್‌ಜೆಡಿ ಪ್ರಚಂಡ ಜಯಗಳಿಸಿದೆ. ಬಿಜೆಪಿ ಬಭುವಾ ಕ್ಷೇತ್ರವನ್ನು ಜಯಿಸಿದೆ.ಆಳುವ ಜೆಡಿಯು ಜೆಹಾನಾಬಾದ್‌ನಲ್ಲಿ ಭಾರೀ ಸೋಲನ್ನು ಅನುಭವಿಸಿ ತೀವ್ರ ಮುಖಭಂಗಕ್ಕೆ ಗುರಿಯಾಗಿದೆ. 

ಆರ್‌ಜೆಡಿ ಶಾಸಕರು ರಾಜ್ಯ ವಿಧಾನಸಭೆಯ ಪ್ರಧಾನ ದ್ವಾರದ ಮುಂದೆ ಜಮಾಯಿಸಿ ಬಿಹಾರದಲ್ಲಿನ ಎನ್‌ಡಿಎ ಕೂಟದ ವಿರುದ್ದ ಘೋಷಣೆ ಕೂಗಿದರು.

Advertisement

Udayavani is now on Telegram. Click here to join our channel and stay updated with the latest news.

Next