Advertisement

ಬೀಡಾಡಿ ಗೂಳಿಗಳ ಕಾಳಗಕ್ಕೆ ಎರಡು ಬೈಕ್, ಕಾರು ಜಖಂ!

07:34 PM Feb 02, 2022 | Team Udayavani |

ಸಾಗರ: ನಗರದ ಬಿಎಚ್. ರಸ್ತೆಯ ಹೋಟೆಲ್ ಅಕ್ಷಯ್ ವೆಜ್ ಎದುರು ಎರಡು ಬೀಡಾಡಿ ಗೂಳಿಗಳ ನಡುವೆ ನಡೆದ ಕಾದಾಟದ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಎರಡು ಬೈಕ್ ಹಾಗೂ ಇನ್ನೊಂದು ಕಾರು ಜಖಂ ಆದ ಘಟನೆ ಮಂಗಳವಾರ ಸಂಜೆ ನಡೆದಿದೆ.

Advertisement

ಹಿಂದೊಮ್ಮೆ ಇದೇ ರೀತಿಯ ಗೂಳಿಗಳ ಕಾದಾಟದ ವೇಳೆ ಗೂಳಿಯಿಂದ ಘಾಸಿಗೊಳಗಾದ ವ್ಯಕ್ತಿ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದ್ದನ್ನು ಸ್ಮರಿಸಿಕೊಳ್ಳಬಹುದು.

ನಗರದೊಳಗೆ ಹೆಚ್ಚುತ್ತಿರುವ ಬೀಡಾಡಿ ದನ, ಗೂಳಿಗಳ ಸಂಖ್ಯೆ ಸಂಬಂಧ ತೀವ್ರ ಆತಂಕ ವ್ಯಕ್ತಪಡಿಸಿರುವ ನಾಗರಿಕರು, ಸಾಕುವ ಜಾನುವಾರುಗಳನ್ನು ರಸ್ತೆಗೆ ಬಿಡಬಾರದು. ತಕ್ಷಣ ನಗರಸಭೆ ಈ ರಿತಿಯ ಬೀಡಾಡಿ ದನ, ಗೂಳಿಗಳನ್ನು ನಿಯಂತ್ರಿಸಲು ದೊಡ್ಡಿಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಸದ್ಯಕ್ಕೆ ಟೋಯಿಂಗ್ ನಿಲ್ಲಿಸಿದ್ದೇವೆ : ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ

Advertisement

Udayavani is now on Telegram. Click here to join our channel and stay updated with the latest news.

Next