Advertisement

ಉಜ್ಜನಿ ಚೌಡೇಶ್ವರೀ ದೇವಿ ‘ಅಗ್ನಿಕೊಂಡ ಉತ್ಸವ’ದಲ್ಲಿ ಸಜ್ಜೆ ಕುಸಿತ : ಹಲವರಿಗೆ ಗಾಯ

09:07 AM Apr 25, 2019 | Hari Prasad |

ತುಮಕೂರು: ಕುಣಿಗಲ್‌ ತಾಲೂಕಿನ ಉಜ್ಜನಿ ಚೌಡೇಶ್ವರೀ ದೇವಿ ಸನ್ನಧಿಯಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ‘ಅಗ್ನಿಕೊಂಡ’ ವೀಕ್ಷಿಸಲು ಭಕ್ತರು ಕಟ್ಟಡವೊಂದರ ಮೇಲೆ ನಿಂತಿದ್ದ ಸಂದರ್ಭದಲ್ಲಿ ಸಜ್ಜೆ ಕುಸಿದು 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಬುಧವಾರ ಬೆಳಿಗ್ಗೆ ಈ ದುರ್ಘ‌ಟನೆ ನಡೆದಿದೆ.

Advertisement

ದೇವಸ್ಥಾನದ ಅಕ್ಕಪಕ್ಕವಿರುವ ಕಟ್ಟಡಗಳನ್ನು ಏರಿನಿಂತು ಭಕ್ತರು ಚೌಡೇಶ್ವರಿ ದೇವಿಯ ಅಗ್ನಿಕೊಂಡ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರು. ಈ ಸಂದರ್ಭದಲ್ಲಿ ಹಳೆಯ ಕಟ್ಟಡವೊಂದರ ಸಜ್ಜೆ ಕುಸಿದಿದೆ. ಜನರ ಭಾರವನ್ನು ತಾಳಲಾರದೆ ಸಜ್ಜೆ ಕುಸಿದಿರುವುದಾಗಿ ತಿಳಿದುಬಂದಿದೆ.

ಗಾಯಾಳುಗಳನ್ನು ಕುಣಿಗಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡವರನ್ನು ಮಂಡ್ಯ ಹಾಗೂ ಬೆಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next