Advertisement

ಪ್ಲಾಸ್ಟಿಕ್‌ ಮುಕ್ತ ಪರಿಸರ ನಿರ್ಮಿಸಿ: ಗಾಂವಕರ

10:47 AM Jun 06, 2019 | Team Udayavani |

ಅಂಕೋಲಾ: ಈಗಾಗಲೇ ನಾವು ಪ್ಲಾಸ್ಟಿಕ್‌ ಮುಕ್ತ ಪರಿಸರವನ್ನು ನಿರ್ಮಿಸಲು ಶೇ. 40ರಷ್ಟು ಜನರಲ್ಲಿ ಅರಿವು ಮೂಡಿಸಲು ಯಶಸ್ಸು ಸಾಧಿಸಿದ್ದೇವೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಮಾಡುವುದನ್ನು ನಿಲ್ಲಿಸಬೇಕು ಎಂದು ತಾಪಂ ಅಧ್ಯಕ್ಷೆ ಸುಜಾತಾ ಗಾಂವಕರ ಹೇಳಿದರು.

Advertisement

ಬುಧವಾರ ತಾಲೂಕು ಮಟ್ಟದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬೊಳೆ ಪ್ರಾಥಮಿಕ ಶಾಲೆಯಲ್ಲಿ ಸಸಿ ನೆಟ್ಟು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಶುದ್ಧ ನೀರು, ಗಾಳಿ ನೀಡುವಂತಾಗಲಿ ಎಂದರು.

ಅಧ್ಯಕ್ಷ ನಾರಾಯಣ ನಾಯ್ಕ, ಶಾಂತಿ ಆಗೇರ, ಸಹಾಯಕ ನಿರ್ದೇಶಕ ಸುನೀಲ ಎಂ., ಸದಸ್ಯೆ ಸರೋಜಾ ನಾಯ್ಕ, ನಾಗರತ್ನ ನಾಯ್ಕ, ಸತೀಶ ಆಗೇರ, ಭಾಸ್ಕರ್‌ ನಾಯ್ಕ ಮಾತನಾಡಿದರು. ನೀಲಕಂಠ ನಾಯ್ಕ ಸ್ವಾಗತಿಸಿದರು. ಶಿಕ್ಷಕ ಜಗದೀಶ ನಾಯಕ ವಂದಿಸಿದರು. ನಾಗೇಂದ್ರ ನಾಯಕ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next