Advertisement

ಕೊಡಗು: ಕಡವೆ ಬೇಟೆಯಾಡಿದ ತಂಡ ಸೆರೆ

10:30 AM Apr 28, 2019 | Team Udayavani |

ಮಡಿಕೇರಿ: ಕೊಡಗು, ಕೇರಳ ಗಡಿಯ ಕುಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿ ಕಡವೆ ಬೇಟೆಯಾಡಿದ ಆರು ಮಂದಿಯ ತಂಡವನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.

Advertisement

ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಕೇರಳ ಗಡಿಭಾಗ ಕುಟ್ಟ- ಇರ್ಪು ಜಂಕ್ಷನ್‌ನಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ವಾಹನ ಸಹಿತ ಕಡವೆ ಮಾಂಸ, ಬೇಟೆಗೆ ಬಳಸಿದ ಆಯುಧಗಳು ಮತ್ತು ಆರು ಮಂದಿಯನ್ನು ವಶಕ್ಕೆ ಪಡೆದರು.

ಬಂಧಿತರು
ಪೊನ್ನಂಪೇಟೆಯ ಮಾಪಿಳ್ಳೆ ತೋಡು ನಿವಾಸಿಗಳಾದ ಕೆ. ಬಿ. ಸಿದ್ದಿಕ್‌, ಎಂ. ಎಚ್‌. ಶಮೀರ್‌, ಎ. ಯು. ಸಮೀರ್‌, ನಾಪೋಕ್ಲುವಿನ ಕುಂಜಿಲ ಗ್ರಾಮದ ಕೆ. ಇ. ಇಸ್ಮಾಯಿಲ್‌, ಕೆ. ಎ. ಯೂಸಫ್ ಹಾಗೂ ಕೆ. ಎ. ಮಹಮ್ಮದ್‌ ಬಂಧಿತರು.

ಕಾರು. ಟೆಂಪೋ ವಶ
ಬಂಧಿತರಿಂದ ಕೃತ್ಯಕ್ಕೆ ಬಳಸಿದ ಒಂಟಿ ನಳಿಕೆಯ ಒಂದು ಬಂದೂಕು, ಇನ್ನಿತರ ಆಯುಧಗಳು, ಸುಮಾರು 150 ಕೆ.ಜಿ. ಕಡವೆ ಮಾಂಸ, ಮಾರುತಿ ಸೆಲೆರಿಯಾ ಕಾರು ಹಾಗೂ ಗೂಡ್ಸ್‌ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಕುಟ್ಟ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸುಮನ್‌ ಡಿ.ಪನ್ನೇಕರ್‌ ಮಾರ್ಗದರ್ಶನದಲ್ಲಿ ಡಿಸಿಐಬಿ ಇನ್‌ಸ್ಪೆಕ್ಟರ್‌ ಕೆ.ನಾಗೇಶ್‌, ಸಿಬಂದಿ ವರ್ಗದ ಕೆ. ಎಸ್‌. ಅನಿಲ್‌ಕುಮಾರ್‌, ಬಿ. ಎಲ್‌. ಯೋಗೇಶ್‌ ಕುಮಾರ್‌, ಕೆ. ಆರ್‌. ವಸಂತ, ಎಂ. ಎಂ. ನಿರಂಜನ್‌ ಹಾಗೂ ಚಾಲಕ ಕೆ. ಎಸ್‌. ಶಶಿಕುಮಾರ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

ಬಹುಮಾನ ಘೋಷಣೆ
ಬೇಟೆಗಾರರನ್ನು ಬಂಧಿಸಿದ ತಂಡಕ್ಕೆ ವರಿಷ್ಠಾಧಿಕಾರಿಗಳು 10 ಸಾ. ರೂ. ನಗದು ಬಹುಮಾನ ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next