Advertisement
ಬಿಟಿಡಿಎ ವ್ಯಾಪ್ತಿಯ ಸಂತ್ರಸ್ತರಿಗೆ (ಗ್ರಾಹಕರು) ಸರಿಯಾದ ಸೇವೆ ಒದಗಿಸದೇ ಸೇವಾ ನೂನ್ಯತೆ ಎಸಗಿದ ಬಿಟಿಡಿಎ ಮುಖ್ಯ ಎಂಜಿನಿಯರ್ ಹಾಗೂ ಪುನರ್ವಸತಿ ಅಧಿಕಾರಿಗೆ 1 ಲಕ್ಷ ರೂ. ದಂಡ ಹಾಗೂ ದೂರುದಾರರು ದೂರಿಗೆ ಖರ್ಚು ಮಾಡಿದ 5 ಸಾವಿರ ರೂ. ನೀಡಲು ಮಹತ್ವದ ತೀರ್ಪು ನೀಡಿದೆ.
Related Articles
Advertisement
ವೇದಿಕೆಯ ನೋಟಿಸ್ಗೂ ಉತ್ತರವಿಲ್ಲ: ವೇದಿಕೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ವೇದಿಕೆಯಿಂದ ಬಿಟಿಡಿಎ ಮುಖ್ಯ ಇಂಜಿನಿಯರ್ ಸೈಯ್ಯದ್ ಇಸಾಕ್ ಅಪ್ಸರ ಮತ್ತು ಪುನರ್ವಸತಿ ಅಧಿಕಾರಿ ರಾಜಶೇಖರ ಡಂಬಳ ಅವರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಗೆ ಹಾಜರಾಗಲು ಮತ್ತು ವಿವರಣೆ ನೀಡಲು ಕೇಳಲಾಗಿತ್ತು. ಆದರೆ, ಇಬ್ಬರು ಅಧಿಕಾರಿಗಳು ತಾವಾಗಲಿ, ತಮ್ಮ ವಕೀಲರ ಮೂಲಕವಾಗಲಿ ವಿಚಾರಣೆಗೆ ಹಾಜರಾಗದೇ, ವಿವರಣೆ ನೀಡದೇ ನಿರ್ಲಕ್ಷé ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷೆ ಶಾರದಾ ಕೆ. ವೇದಿಕೆಯ ಮಹಿಳಾ ಸದಸ್ಯೆ ಸುಮಂಗಲಾ ಹದ್ಲಿ ಸಮಕ್ಷಮ ಆದೇಶ ಹೊರಡಿಸಿದ್ದಾರೆ.
1 ಲಕ್ಷ ರೂ. ದಂಡ: ಬಿಟಿಡಿಎ ಮುಖ್ಯ ಎಂಜಿನಿಯರ್ ಸೈಯ್ಯದ್ ಇಸಾಕ್ ಅಪ್ಸರ ಹಾಗೂ ಪುನರ್ವಸತಿ ಅಧಿಕಾರಿ ರಾಜಶೇಖರ ಡಂಬಳ (ಪ್ರಭಾರಿ) ಅವರು, ದೂರುದಾರರಾದ ಬಿ.ಟಿ. ಮಾಸರಡ್ಡಿ ಮತ್ತು ಎಸ್.ಎಚ್. ಸಂಕರಡ್ಡಿ ಅವರಿಗೆ ಮಾನಸಿಕ ವ್ಯಥೆ ಉಂಟು ಮಾಡಿದ್ದಕ್ಕೆ 1 ಲಕ್ಷ ದಂಡ, ದೂರಿನ ಖರ್ಚು 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೇ ತೀರ್ಪು ನೀಡಿದ 30 ದಿನಗಳ ಒಳಗಾಗಿ ಜಾಗೆಯ ಮೂಲ ಮಾಲಿಕರ ಹೆಸರು ಕಡಿಮೆ ಮಾಡಿ, ಖರೀದಿದಾರರ ಹೆಸರು ದಾಖಲಿಸಿ ಹಕ್ಕುಪತ್ರ ಕೊಡಬೇಕು. 30 ದಿನಗಳ ಒಳಗಾಗಿ ಕೊಡದಿದ್ದರೆ ಮುಂದಿನ ಪ್ರತಿ ದಿನಕ್ಕೆ 100 ರೂ. ದಂಡ ಹಾಕಿ, ಹಕ್ಕುಪತ್ರ ಕೊಡಬೇಕು ಎಂಬ ತೀರ್ಪು ನೀಡಲಾಗಿದೆ. ಹಣಕ್ಕಾಗಿ ಬೇಡಿಕೆ ಇಟ್ಟು, ಸಂತ್ರಸ್ತರ ಕೆಲಸ- ಕಾರ್ಯ ವಿಳಂಬ ಮಾಡುವ ಬಿಟಿಡಿಎ ಅಧಿಕಾರಿಗಳಿಗೆ ಮೊದಲ ಬಾರಿಗೆ ದೊಡ್ಡ ಪ್ರಮಾಣದ ಛಾಟಿ ಗ್ರಾಹಕರ ವೇದಿಕೆ ನೀಡಿದೆ. ಇನ್ನಾದರೂ ಅಧಿಕಾರಿಗಳು, ತಮ್ಮ ಕಾರ್ಯ ವೈಖರಿ ಬದಲಿಸಿಕೊಳ್ಳಲಿ ಎಂಬುದು ಸಂತ್ರಸ್ತರ ಒತ್ತಾಯ.
ಟಿಫಿನ್ ಕ್ಯಾರಿಯರ್ಗಳೇ ಸೂಟಗೇಸ್!ಬಿಟಿಡಿಎನಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ಇಂದು- ನಿನ್ನೆಯ ಆರೋಪವಲ್ಲ. ಹಿಂದೆ ಸ್ವತಃ ಹಿರಿಯ ಅಧಿಕಾರಿಗಳೇ ಲೋಕಾಯುಕ್ತ, ಎಸಿಬಿ ಬೆಲೆಗೆ ಬಿದ್ದ ಘಟನೆ ನಡೆದಿವೆ. ಆದರೂ, ಅಧಿಕಾರಿಗಳು, ಸಿಬ್ಬಂದಿ ಬದಲಾಗಿಲ್ಲ. ಇಲ್ಲಿನ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಯೂ ದೊಡ್ಡ ದೊಡ್ಡ ಟಿಫಿನ್ ಕ್ಯಾರಿಯರ್ ತರುತ್ತಾರೆ. ಅದರಲ್ಲಿ ಊಟ ತರುವ ಉದ್ದೇಶಕ್ಕಿಂತ, ಸಂಜೆ ಹಣ ತುಂಬಿಕೊಂಡು ಹೋಗುವ ಉದ್ದೇಶ ಹೊಂದಿರುತ್ತಾರೆ. ಇದೂ ಕೂಡ ನಗರದ ಬಹುತೇಕರಿಗೆ ತಿಳಿದಿರುವ ಸತ್ಯ. ಬಿಟಿಡಿಎನಲ್ಲಿ ಭ್ರಷ್ಟಾಚಾರ ದೊಡ್ಡ ಮಟ್ಟದಲ್ಲಿ ಇರುವುದು ಬಹಿರಂಗ ಸತ್ಯ. ಹಲವು ಬಾರಿ ಸಭೆಯಲ್ಲಿ ಈ ಕುರಿತು ಹಿರಿಯ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಆದರೂ ಕಾರ್ಯವೈಖರಿ ಬದಲಾಗಿಲ್ಲ. ಈ ಕುರಿತು ನಮಗೂ ಅಸಮಾಧಾನವಿದೆ.
ಆನಂದ ಜಿಗಜಿನ್ನಿ,
ಬಿಟಿಡಿಎ ನಿಕಟಪೂರ್ವ ಸದಸ್ಯ ಹಣ ಕೊಡದ್ದಕ್ಕೆ ವಿಳಂಬ
ಬಿಟಿಡಿಎ ಅಧಿಕಾರಿಗಳು ಹಕ್ಕುಪತ್ರ ಕೊಡಲು ಹಣದ ಬೇಡಿಕೆ ಇಟ್ಟಿದ್ದರು. ಕೆಲಸ ಮಾಡಿಕೊಡಿ, ಬಳಿಕ ನೋಡೋಣ ಎಂದು ಸಮಜಾಯಿಸಿದ್ದೆ. ಅವರು ಕೆಲಸವೂ ಮಾಡದೇ, ಅರ್ಜಿಯನ್ನೂ ತಿರಸ್ಕರಿಸದೇ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದ್ದರು. ಹೀಗಾಗಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ಹೋಗಬೇಕಾಯಿತು. ವೇದಿಕೆ ಕಳೆದ ಸೆ.29ರಂದು ತೀರ್ಪು ನೀಡಿ, 30 ದಿನಗಳ ಒಳಗಾಗಿ ಹಕ್ಕುಪತ್ರ ನೀಡಲು ಆದೇಶಿಸಿದೆ.
ಸುನೀಲ ಮಾಸರಡ್ಡಿ,
ವಕೀಲರು ಮತ್ತು ದೂರುದಾರರ ಪುತ್ರ. ಶ್ರೀಶೈಲ ಕೆ. ಬಿರಾದಾರ