Advertisement

ಮಂಜು ಕವಿದ ವಾತಾವರಣವದಲ್ಲಿ ಬಿಎಸ್ ವೈ ವಾಕಿಂಗ್

10:15 AM Oct 05, 2019 | keerthan |

ಬೆಳಗಾವಿ: ಪ್ರವಾಹ ಸಂತ್ರಸ್ತರ ಅಳಲು ಕೇಳಲು ಗಡಿ ಜಿಲ್ಲೆಗೆ ಬಂದಿರುವ  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ ಬೆಳಗ್ಗೆ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಚುಮು ಚುಮು ಇಬ್ಬನಿಗಳ ಮಧ್ಯೆ ವಾಯುವಿಹಾರ ನಡೆಸಿದರು.

Advertisement

ಸರ್ಕ್ಯೂಟ್ ಹೌಸ್ ಆವರಣದಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ವಾಕಿಂಗ್ ಮಾಡಿದರು. ಬೆಳಗ್ಗೆ ಎದ್ದು ಕೂಡಲೇ ಗ್ರೀನ್ ಟೀ ಕುಡಿದ ಮುಖ್ಯಮಂತ್ರಿಗಳು ಎಲ್ಲಾ ದಿನಪತ್ರಿಕೆಗಳ ಮೇಲೆ ಕಣ್ಣು ಹಾಯಿಸಿ ಆವರಣದೊಳಗೆ ಹೋಗಿ ಐದು ಸುತ್ತು ವಾಕಿಂಗ್ ಮಾಡಿದರು.‌ ಸಾಮಾನ್ಯವಾಗಿ ಮುಖ್ಯಮಂತ್ರಿ ಬಿಎಸ್ ವೈ 6 ಗಂಟೆಗೆ ಎದ್ದು ವಾಕಿಂಗ್ ಮಾಡುತ್ತಾರೆ. ಇಂದು ಸ್ವಲ್ಪ ತಡವಾಗಿದ್ದರಿಂದ 7 ಗಂಟೆಗೆ ವಾಯುವಿಹಾರ ನಡೆಸಿದರು.

ಈ ಸಿಎಂ ಜೊತೆ ಮಾಡುವ ವೇಳೆ ಮಾಜಿ ಶಾಸಕ ಸಂಜಯ ಪಾಟೀಲ, ಮುಖಂಡರಾದ ಎಂ.ಬಿ. ಜಿರಲಿ, ರಾಜು ಚಿಕ್ಕನಗೌಡರ ಸೇರಿದಂತೆ ಇತರೆ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next