Advertisement

ಬಿಎಸ್ ವೈ ಹಳ್ಳಿಯವರು, ಮುಗ್ಧರು, ಎಚ್ ಡಿಕೆ ಬ್ಲ್ಯಾಕ್ ಮೇಲರ್: ಆಯನೂರು

10:19 AM Feb 09, 2019 | Sharanya Alva |

ಶಿವಮೊಗ್ಗ:ಬಿಎಸ್ ಯಡಿಯೂರಪ್ಪ ಹುಟ್ಟು ಹೋರಾಟಗಾರರು ಅವರನ್ನು ಸಿಲುಕಿಸಲು ಪ್ರಯತ್ನಿಸಲಾಗುತ್ತಿದೆ. ಬಿಎಸ್ ವೈ ಹಳ್ಳಿಯವರು, ಮುಗ್ಧರು. ಇಂತಹ ಕೆಟ್ಟ ಕೆಲಸ ಮಾಡಲು ಬಿಎಸ್ ವೈಗೆ ಗೊತ್ತಾಗುವುದಿಲ್ಲ ಎಂದು ಬಿಜೆಪಿ ಎಂಎಲ್ ಸಿ ಆಯನೂರು ಮಂಜುನಾಥ್ ಬಹುಪರಾಕ್ ಹೇಳಿದ್ದಾರೆ.

Advertisement

ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅತೃಪ್ತ ಕಾಂಗ್ರೆಸ್ ಶಾಸಕರನ್ನು ನಾವು ಸಂಪರ್ಕಿಸಲು ಹೋಗಿಲ್ಲ. ಅತೃಪ್ತ ಶಾಸಕರೇ ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. 38 ಶಾಸಕರನ್ನು ಹೊಂದಿರುವ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದಾದರೆ, 104 ಶಾಸಕರನ್ನು ಹೊಂದಿರುವ ಬಿಜೆಪಿಗೆ ಸಿಎಂ ಸ್ಥಾನ ಪಡೆಯುವ ನೈತಿಕತೆ ಇದೆ ಎಂದರು.

ಕುಮಾರಸ್ವಾಮಿ ಆಡಿಯೋ, ವಿಡಿಯೋ ಸಂಸ್ಥೆಯ ಮಾಲೀಕರಾಗಿದ್ದಾರೆ. ಹೀಗಾಗಿ ನಕಲಿ ಶಾಮರ ತಂಡ ಕಟ್ಟಿಕೊಂಡು ನಕಲಿ ಆಡಿಯೋ, ವಿಡಿಯೋ ಬಿಡುಗಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಎಚ್ ಡಿಕೆ ಒಬ್ಬ ಬ್ಲ್ಯಾಕ್ ಮೇಲರ್:

Advertisement

ಮುಖ್ಯಮಂತ್ರಿ ಕುಮಾರಸ್ವಾಮಿ ಒಬ್ಬ ಬ್ಲ್ಯಾಕ್ ಮೇಲರ್. ಇಂತಹ ಕಲೆಗಳು ಗೊತ್ತಿರುವುದು ಅವರಿಗೆ ಹೆಚ್ಚು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮುಲ್ ಬೇಬಿ ಎಂದು ವ್ಯಂಗ್ಯವಾಡಿರುವ ಆಯನೂರು, ಯಡಿಯೂರಪ್ಪನವರು ಇಂತಹ ನಕಲಿ ಆಡಿಯೋ, ವಿಡಿಯೋಕ್ಕೆಲ್ಲ ಹೆದರುವುದಿಲ್ಲ ಎಂದರು

Advertisement

Udayavani is now on Telegram. Click here to join our channel and stay updated with the latest news.

Next