Advertisement

ಬಿಎಸ್‌ವೈ ರಾಜಾ ಹುಲಿ ಅಲ್ಲ, ಹೆಣ್ಣು ಹುಲಿ: ಕಂದಕೂರ

11:02 PM Sep 08, 2019 | Team Udayavani |

ಯಾದಗಿರಿ: ಎಚ್‌.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಗುರುಮಿಠಕಲ್‌ ಕ್ಷೇತ್ರಕ್ಕೆ ನೀಡಿದ್ದ 7.50 ಕೋಟಿ ಅನುದಾನ ಕಡಿತ ಮಾಡುವ ಮೂಲಕ ಸಿಎಂ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇದಕ್ಕೆ ಬಗ್ಗುವುದಿಲ್ಲ ಎಂದು ಶಾಸಕ ನಾಗನಗೌಡ ಕಂದಕೂರ ಹೇಳಿದರು. ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ರಾಜಾ ಹುಲಿಯಲ್ಲ, ಅವರೊಬ್ಬ ಹೆಣ್ಣು ಹುಲಿ.

Advertisement

ಮೋದಿ, ಶಾ ಕಂಡರೆ ಹೆದರುತ್ತಾರೆ. ಎಚ್‌ಡಿಕೆ ಎಚ್‌ಕೆಆರ್‌ಡಿಬಿ ಅನುದಾನದಡಿ ಮುಖ್ಯಮಂತ್ರಿ ವಿವೇಚನಾ ಕೋಟಾದಡಿ ನನ್ನ ಕ್ಷೇತ್ರಕ್ಕೆ 4.50 ಕೋಟಿ ಅನುದಾನ ಮಂಜೂರಾತಿ ಮಾಡಿದ್ದರು. ಇದಲ್ಲದೇ ಪಂಚಾಯತ್‌ ರಾಜ್‌ ಎಂಜಿನಿಯರ್‌ ವಿಭಾಗಕ್ಕೆ 3 ಕೋಟಿ ಅನುದಾನ ನೀಡಿದ್ದರು. ಇದನ್ನು ವಾಪಸ್‌ ಪಡೆಯಲಾಗಿದೆ. ಆಪರೇಷನ್‌ ಕಮಲ ಮೂಲಕ ನನ್ನನ್ನು ಸೆಳೆಯಲು ಮುಂದಾಗಿದ್ದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next