Advertisement

ಶ್ರಮಿಕ ವರ್ಗದ ಪಾಲಿಗೆ ಆಶಾಕಿರಣ ಬಿಎಸ್‌ವೈ: ಶಾಸಕ ಹರೀಶ್‌ ಪೂಂಜ ಶ್ಲಾಘನೆ

12:23 AM May 07, 2020 | Sriram |

ಬೆಳ್ತಂಗಡಿ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಲಾಕ್‌ಡೌನ್‌ ಸಂದರ್ಭ ತೊಂದರೆಯಲ್ಲಿರುವ ವಿವಿಧ ವರ್ಗಗಳ ಪಾಲಿಗೆ 1,610 ಕೋಟಿ ರೂ. ವಿಶೇಷ ಪ್ಯಾಕೇಜ್‌ ನೀಡಿ ಕಾಮಧೇನುವಾಗಿದ್ದಾರೆ ಎಂದು ಶಾಸಕ ಹರೀಶ್‌ ಪೂಂಜ ಹೇಳಿದ್ದಾರೆ.

Advertisement

ಈ ಪ್ಯಾಕೇಜ್‌ ರಾಜ್ಯದಲ್ಲಿನ ಟ್ಯಾಕ್ಸಿ ಚಾಲಕರು, ಆಟೋ ಚಾಲಕರು, ಕ್ಷೌರಿಕರು, ಮಡಿವಾಳರು, ಕಟ್ಟಡ ನಿರ್ಮಾಣ ಕಾರ್ಮಿಕರು, ಹೂವು-ತರಕಾರಿ ಬೆಳೆಗಾರರು ನೇಕಾರರು ಹೀಗೆ ಸಮಾಜದ ವಿವಿಧ ವರ್ಗಗಳ ಶ್ರಮಿಕರ ಬದುಕಿಗೆ ಸಹಕಾರಿಯಾಗಲಿದೆ.

ಹೂ ಬೆಳೆಗಾರರು ಸೇರಿದಂತೆ ತರಕಾರಿ ಮತ್ತು ಹಣ್ಣು ಬೆಳೆಗಾರರಿಂದ ಹಿಡಿದು ನೋಂದಾಯಿತ ಕಟ್ಟಡ ಕಾರ್ಮಿಕರ ವರೆಗೆ ಹೆಚ್ಚುವರಿಯಾಗಿ ಮತ್ತೆ 3,000 ಪರಿಹಾರ ಘೋಷಿಸಿದ್ದಾರೆ. ಈ ಮೂಲಕ ರಾಜ್ಯದ ಶ್ರಮಿಕ ವರ್ಗದ ಪರವಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತೆಗೆದುಗೊಂಡ ನಿರ್ಧಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next