Advertisement

ದೆಹಲಿ ಭೇಟಿ ತೃಪ್ತಿ ನೀಡಿದೆ : ಆದಷ್ಟು ಬೇಗ ಶುಭ ಸುದ್ದಿ ಸಿಗಲಿದೆ : ಬಿಎಸ್ ವೈ

05:01 PM Jan 10, 2021 | Team Udayavani |

ಬೆಂಗಳೂರು / ನವದೆಹಲಿ : ದೆಹಲಿಯಲ್ಲಿ ವರಿಷ್ಠರ ಭೇಟಿ ತೃಪ್ತಿ ನೀಡಿದೆ ಅಲ್ಲದೆ ಆದಷ್ಟು ಬೇಗ ಶುಭ ಸುದ್ದಿ ಸಿಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

Advertisement

ರಾಷ್ಟ್ರ ರಾಜಧಾನಿ ಹೊಸದಿಲ್ಲಿಗೆ ತೆರಳಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ವರಿಷ್ಠರ ಜೊತೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರ ನಾಯಕರೊಂದಿಗಿನ ಚರ್ಚೆ ಸಂತೋಷ ತಂದಿದೆ ಅಲ್ಲದೆ ವರಿಷ್ಠರ ಜೊತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದು ವರಿಷ್ಠರು ಪೂರಕವಾದ ಸ್ಪಂದನೆಯನ್ನು ನೀಡಿದ್ದಾರೆ ಎಂದರು,

ಆದಷ್ಟು ಬೇಗ ಕೇಂದ್ರದ ನಾಯಕರಿಂದ ಶುಭ ಸುದ್ದಿ ಸಿಗಲಿದೆ ಎಂದಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ ವರಿಷ್ಠರಿಗೆ ಸಂತೋಷ ನೀಡಿದ್ದು ಮುಂಬರುವ ಲೋಕಸಭಾ ಮತ್ತು ವಿಧಾನ ಸಭಾ ಚುನಾವಣೆಯಲ್ಲೂ ಮೂರು ಸ್ಥಾನಗಳಲ್ಲೂ ಪಕ್ಷ ಗೆಲ್ಲುವ ಕುರಿತು ಚರ್ಚೆ ನಡೆಯಿತು ಅಲ್ಲದೆ ಅಕಾಂಕ್ಷಿಗಳ ಪಟ್ಟಿಯನ್ನು ಕಳುಹಿಸಿಕೊಡಲು ತಿಳಿಸಿದ್ದಾರೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next