Advertisement

ಮಧ್ಯ ಪ್ರದೇಶದಲ್ಲಿ ನಾವು ಕಾಂಗ್ರೆಸ್‌ ಬೆಂಬಲಿಸುತ್ತೇವೆ: ಮಾಯಾವತಿ

11:51 AM Dec 12, 2018 | udayavani editorial |

ಹೊಸದಿಲ್ಲಿ  : ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವುದಕ್ಕಾಗಿ ಮತ್ತು ಮಧ್ಯ ಪ್ರದೇಶದಲ್ಲಿ ಸರಕಾರ ರಚನೆಗೆ ಅನುಕೂಲ ಕಲ್ಪಿಸುವ ಸಲುವಾಗಿ ನಾವು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತೇವೆ ಎಂದು ಬಿಎಸ್‌ಪಿ ಪರಮೋಚ್ಚ ನಾಯಕಿ ಮಾಯಾವತಿ ಹೇಳಿದ್ದಾರೆ. 

Advertisement

ಕಾಂಗ್ರೆಸ್‌ ಪಕ್ಷಕ್ಕೆ ಅತ್ಯಂತ ತೆಳುವಾದ ಬಹುಮತ ಪ್ರಾಪ್ತವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೇಗಾದರೂ ಮಾಡಿ ಅಧಿಕಾರಕೇರುವ ಯತ್ನ ನಡೆಸುತ್ತಿದೆ; ಆದರೆ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವುದಕ್ಕಾಗಿ ನಾವು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತೇವೆ ಎಂದು ಮಾಯಾವತಿ ಹೇಳಿದರು. 

ನಾವು ಚುನಾವಣೆಯಲ್ಲಿ ಹೋರಾಡಿದ್ದೇ ಬಿಜೆಪಿಯನ್ನು ಪದಚ್ಯುತ ಮಾಡಲು; ನಾವು ಕಾಂಗ್ರೆಸ್‌ ತತ್ವವನ್ನು ಒಪ್ಪುವುದಿಲ್ಲ; ಆದರೆ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಸಲುವಾಗಿ ನಾವು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತೇವೆ ಎಂದು ಮಾಯಾವತಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next