Advertisement

ಸಿಎಎ ಬಹಿರಂಗ ಚರ್ಚೆ : ಸವಾಲು ಸ್ವೀಕರಿಸಿದ ಮಾಯಾವತಿ

09:59 AM Jan 24, 2020 | Hari Prasad |

ಲಕ್ನೋ/ಹೈದರಾಬಾದ್‌: ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಬಹಿರಂಗ ಚರ್ಚೆ ನಡೆಸೋಣ ಎಂಬ ಗೃಹ ಸಚಿವ ಅಮಿತ್‌ ಶಾ ಸವಾಲನ್ನು ಬಿಎಸ್‌ಪಿ ನಾಯಕಿ ಮಾಯಾವತಿ ಬುಧವಾರ ಸ್ವೀಕರಿಸಿದ್ದಾರೆ. ಇದೇ ವೇಳೆ ಎಸ್‌ಪಿ ಅಧ್ಯಕ್ಷ ಅಭಿವೃದ್ಧಿ ವಿಚಾರದಲ್ಲಿ ಮುಕ್ತ ಚರ್ಚೆಗೆ ಬನ್ನಿ ಎಂದು ಪ್ರತಿ ಸವಾಲು ಹಾಕಿದ್ದಾರೆ.

Advertisement

ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಒವೈಸಿ ಶಾ ಸವಾಲಿಗೆ ಉತ್ತರ ನೀಡಿ, ‘ಗಡ್ಡ ಬಿಟ್ಟಿರುವವರ ಜತೆಗೆ ಕೂಡ ಚರ್ಚೆಗೆ’ ಬನ್ನಿ ಎಂದಿದ್ದಾರೆ. ಇದೇ ವೇಳೆ ಮಹಾರಾಷ್ಟ್ರ ಸಚಿವ ಅಶೋಕ್‌ ಚವಾಣ್‌ ಮುಸ್ಲಿಂ ತುಷ್ಟೀಕರಣ ಕುರಿತ ಹೇಳಿಕೆಗೆ ಬಿಜೆಪಿ ಆಕ್ಷೇಪ ಮಾಡಿದ್ದು, ಕಾಂಗ್ರೆಸನ್ನು ‘ಮುಸ್ಲಿಂ ಲೀಗ್‌ ಕಾಂಗ್ರೆಸ್‌’ ಎಂದು ಕರೆಯಬೇಕಾಗಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next