Advertisement

ಮೈತ್ರಿಗೆ ಮತ ಹಾಕದ್ದಕ್ಕೆ ಬಿಎಸ್ಪಿ ಶಾಸಕ ಮಹೇಶ್ ಪಕ್ಷದಿಂದ ಉಚ್ಛಾಟನೆ

12:59 PM Jul 24, 2019 | Hari Prasad |

ಬೆಂಗಳೂರು: ಮೈತ್ರಿ ಸರಕಾರದ ಅಳಿವು ಉಳಿವಿನ ಪ್ರಶ್ನೆಯಾಗಿದ್ದ ಇಂದಿನ ವಿಶ್ವಾಸ ಮತ ನಿರ್ಣಯದ ಸಂದರ್ಭದಲ್ಲಿ ಮೈತ್ರಿ ಸರಕಾರದ ಪರ ಮತ ಚಲಾಯಿಸದ ಬಹುಜನ ಸಮಾಜ ಪಕ್ಷದ ಶಾಸಕ ಎನ್. ಮಹೇಶ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

Advertisement

ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರ ಸೂಚನೆ ಇದ್ದರೂ ಮೈತ್ರಿ ಸರಕಾರದ ಪರ ಮತ ಚಲಾಯಿಸದ ಕಾರಣಕ್ಕೆ ಮಹೇಶ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಮಹೇಶ್ ಅವರು ಸದನ ಕಲಾಪದಿಂದ ದೂರವೇ ಉಳಿದಿದ್ದರು ಮತ್ತು ಈ ಮೂಲಕ ತನ್ನ ಪಕ್ಷದ ನಾಯಕರ ಸೂಚನೆಯನ್ನು ನಿರ್ಲಕ್ಷಿಸಿದ್ದರು. ಮಹೇಶ್ ಅವರು ರಾಜ್ಯದಲ್ಲಿ ಬಿಎಸ್ಪಿಯ ಏಕೈಕ ಶಾಸಕರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next