Advertisement

ಸೇನೆ ವಿರುದ್ಧ ಆರೋಪಿಸಿದ್ದ ಯೋಧ ಬಹದ್ದೂರ್ ಬಂಧನ, ಮಾನಸಿಕ ಹಿಂಸೆ?

05:28 PM Feb 02, 2017 | Team Udayavani |

ನವದೆಹಲಿ: ತಮ್ಮ ಸೇನಾ ಶಿಬಿರದಲ್ಲಿರುವ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ, ಊಟ ನೀಡಲಾಗುತ್ತಿದೆ ಎಂದು ಆರೋಪಿಸಿ ಫೇಸ್ ಬುಕ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿ ವೈರಲ್ ಆಗುವ ಮೂಲಕ ಬಿಎಸ್ಎಫ್ ಯೋಧ ತೇಜ್ ಬಹಾದ್ದೂರ್ ಸುದ್ದಿ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇದೀಗ ತನ್ನ ಗಂಡನನ್ನು  ಬಂಧಿಸಿ, ಮಾನಸಿಕವಾಗಿ ಹಿಂಸೆ ನೀಡುತ್ತಿರುವುದಾಗಿ ಪತ್ನಿ ಗುರುವಾರ ಗಂಭೀರವಾಗಿ ಆರೋಪಿಸಿದ್ದಾರೆ.

Advertisement

ತನ್ನ ಗಂಡ ತೇಜ್ ಬಹದ್ದೂರ್ ತಮ್ಮ ಜೊತೆಯಲ್ಲಿರುವವರ ಒಬ್ಬರ ಮೊಬೈಲ್ ನಿಂದ ನನಗೆ ಕರೆ ಮಾಡಿ, ತನ್ನನ್ನು ಬಂಧನದಲ್ಲಿಟ್ಟಿದ್ದು, ತನಗೆ ಜೀವ ಬೆದರಿಕೆ ಒಡ್ಡಿ ಮಾನಸಿಕ ಹಿಂಸೆ ಕೊಡುವುತ್ತಿರುವುದಾಗಿ ತಿಳಿಸಿದ್ದಾರೆಂದು ಪತ್ನಿ ಶರ್ಮಿಳಾ ಯಾದವ್ ಹೇಳಿದ್ದಾರೆ.

ಏತನ್ಮಧ್ಯೆ ಬಿಎಸ್ ಎಫ್ ಮೂಲಗಳು, ಈ ಆರೋಪವನ್ನು ಅಲ್ಲಗಳೆದಿದೆ. ತೇಜ್ ಬಹದ್ದೂರ್ ಅವರನ್ನು ಬಂಧಿಸಿಲ್ಲ. ವಿಚಾರಣೆ ವೇಳೆ ತೇಜ್ ಬಹದ್ದೂರ್ ತಪ್ಪಿತಸ್ಥ ಎಂಬುದು ತಿಳಿದು ಬಂದಿದೆ. ತೇಜ್ ಬಹದ್ದೂರ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆ ಶಿಫಾರಸು ಮಾಡಲಾಗಿದ್ದು, ಅದಕ್ಕೆ ಈವರೆಗೂ ಅನುಮತಿ ಸಿಕ್ಕಿಲ್ಲ ಎಂದು ವಿವರಿಸಿದೆ.

ಅಲ್ಲದೇ ಜನವರಿ 30ರ ಸಂಜೆ ತೇಜ್ ಬಹದ್ದೂರ್ ಅವರ ವಿಆರ್ ಎಸ್(ಸ್ವಯಂ ಸೇವಾ ನಿವೃತ್ತಿ) ಅನ್ನು ರದ್ದುಗೊಳಿಸಲಾಗಿತ್ತು. ಕೋರ್ಟ್ ವಿಚಾರಣೆ ಬಾಕಿ ಹಂತದಲ್ಲಿರುವಾಗ ಮಾತ್ರ ವಿಆರ್ ಎಸ್ ಅನ್ನು ರದ್ದುಮಾಡಲಾಗುತ್ತದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next