Advertisement

ಪ್ರಪಾತಕ್ಕೆ ಬಿದ್ದೂ ಮೇಲೇರಿ ಬಂದ ಸೆನ್ಸೆಕ್ಸ್‌ 190 ಅಂಕ ಏರಿಕೆ

04:30 PM Dec 11, 2018 | udayavani editorial |

ಮುಂಬಯಿ : ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ಅವರು ಹಠಾತ್ತನೇ ತಮ್ಮ ಹುದ್ದೆಗೆ ರಾಜಿನಾಮೆ ನೀಡಿರುವ ಆಘಾತಕ್ಕೆ ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 500ಕ್ಕೂ ಅಧಿಕ ಅಂಕಗಳ ನಷ್ಟ ಅನುಭವಿಸಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಅನಂತರದಲ್ಲಿ ಭಾರೀ ಚೇತರಿಕೆಯನ್ನು ಕಂಡು ದಿನದ ವಹಿವಾಟನ್ನು 190.29 ಅಂಕಗಳ ಏರಿಕೆಯನ್ನು 35,150.01 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 60.70 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 10,549.15 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ನಿನ್ನೆ ಸೋಮವಾರದ ವಹಿವಾಟನ್ನು ಸೆನ್ಸೆಕ್ಸ್‌ 714 ಅಂಕಗಳ ನಷ್ಟದಲ್ಲಿ ಕೊನೆಗೊಳಿಸಿತ್ತು.

ಇಂದಿನ ವಹಿವಾಟಿನಲ್ಲಿ ಟಾಪ್‌ ಗೇನರ್‌ಗಳಾಗಿ ಮೂಡಿ ಬಂದ ಎಸ್‌ ಬ್ಯಾಂಕ್‌, ಸನ್‌ ಫಾರ್ಮಾ, ಏಶ್ಯನ್‌ ಪೇಂಟ್‌, ಎಸ್‌ಬಿಐ, ಎಕ್ಸಿಸ್‌ ಬ್ಯಾಂಕ್‌, ಐಟಿಸಿ,ಮಹೀಂದ್ರ, ಕೋಟಕ್‌ ಬ್ಯಾಂಕ್‌, ಕೋಲ್‌ ಇಂಡಿಯಾ, ಟಿಸಿಎಸ್‌ ಮತ್ತು ಒಎನ್‌ಜಿಸಿ ಶೇ.7ರ ಏರಿಕೆಯನ್ನು ಕಂಡವು. 

ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ರಾಜೀನಾಮೆಯ ಆಘಾತಕ್ಕೆ  ಡಾಲರ್‌ ಎದುರು ರೂಪಾಯಿ ಇಂದು 110 ಪೈಸೆಯ ಕುಸಿತವನ್ನು ಕಂಡು 71.81 ರೂ. ಮಟ್ಟದಲ್ಲಿ ವ್ಯಹಹಾರ ನಿರತವಾಗಿತ್ತು. 

Advertisement

ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು  2554 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,624 ಕಂಪೆನಿಗಳು ಮುನ್ನಡೆ ಸಾಧಿಸಿದವು;  791 ಕಂಪೆನಿಗಳು ಹಿನ್ನಡೆಗೆ ಗುರಿಯಾದವು;  139 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next