Advertisement

ನದಿಯಲ್ಲಿ ಈಜಲು ಹೋದ ಬಿಎಸ್‌ಸಿ ವಿದ್ಯಾರ್ಥಿ ಸಾವು

05:45 PM Apr 21, 2022 | Team Udayavani |

ಭಾಲ್ಕಿ: ಮಾಂಜ್ರಾ ನದಿಯಲ್ಲಿ ಸಹಪಾಠಿಗಳ ಜತೆಗೆ ಈಜಲು ಹೋಗಿದ್ದ ವೇಳೆ ನೀರು ಪಾಲಾಗಿದ್ದ ವಿದ್ಯಾರ್ಥಿಯ ಶವ ಬುಧವಾರ ಪತ್ತೆಯಾಗಿದೆ.

Advertisement

ಈ ಘಟನೆ ತಳವಾಡ(ಎಂ)ನಲ್ಲಿ ನಡೆದಿದ್ದು, ಪರಮೇಶ್ವರ ಗೋವಿಂದ(20) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಭಾಲ್ಕಿಯ ಚನ್ನಬಸವೇಶ್ವರ ಕಾಲೇಜಿನಲ್ಲಿ ಬಿಎಸ್ಸಿ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಈತ, ತನ್ನ ಐದಾರೂ ಸ್ನೇಹತರ ಜತೆಗೆ ಗ್ರಾಮದಲ್ಲಿನ ಕೆರೆಗೆ ಕಳೆದ ಸೋಮವಾರ ಮಧ್ಯಾಹ್ನ 1ಗಂಟೆಗೆ ಈಜಾಡಲು ಹೋಗಿದ್ದರು. ಸುಮಾರು ಹೊತ್ತು ಎಲ್ಲರೂ ಸೇರಿ ನೀರಿನಲ್ಲಿ ಈಜಿದ್ದಾರೆ. ಆದರೆ, ಕೊನೆಗೆ ಪರಮೇಶ್ವರ ನೀರಿನಲ್ಲಿ ಸಿಲುಕಿದ್ದಾನೆ. ಜತೆಗಿದ್ದ ಸ್ನೇಹಿತರು ಈತನನ್ನು ರಕ್ಷಿಸಲು ಮುಂದಾಗಿದ್ದಾರೆ. ಅಷ್ಟು ಹೊತ್ತಿಗಾಗಲೇ ಪರಮೇಶ್ವರ ಮಾಂಜ್ರಾ ನದಿ ನೀರಿನ ಸೆಳೆತಕ್ಕೆ ಸಿಲುಕಿ ನೀರು ಪಾಲಾಗಿದ್ದ ಎನ್ನಲಾಗಿದೆ.

ಶವದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಬುಧವಾರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು. ಭಾಲ್ಕಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next