Advertisement

ಬಿಎಸ್‌ಪಿ ಸಿದ್ಧಾಂತ ಜನತೆಗೆ ತಿಳಿಸಿ: ಪುರುಷೋತ್ತಮ್‌

03:20 PM Oct 05, 2021 | Team Udayavani |

ದೊಡ್ಡಬಳ್ಳಾಪುರ: ಬಿಜೆಪಿ ಹಾಗೂ ಕಾಂಗ್ರೆಸ್‌ ಸಾಂವಿಧಾನಿಕ ಸತ್ಯ ಮರೆ ಮಾಚುತ್ತಿದ್ದು, ಜನರನ್ನು ಮೌಡ್ಯಗಳ ಮೂಲಕ ದಿಕ್ಕು ತಪ್ಪಿಸುತ್ತಿವೆ ಎಂದು ಬಿಎಸ್‌ಪಿರಾಜ್ಯ ಹಿರಿಯ ಮುಖಂಡರಾದ ಪುರುಷೋತ್ತಮ್‌ ಹೇಳಿದರು.

Advertisement

ನಗರದ ಬಿಎಸ್‌ಪಿ ಕಾರ್ಯಾಲಯದಲ್ಲಿ ನಡೆದದೊಡ್ಡಬಳ್ಳಾಪುರ ತಾಲೂಕು ಹಾಗೂ ನಗರ ಮಟ್ಟದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಹುಜನ ಸಮಾಜ ಪಾರ್ಟಿ ಬಗ್ಗೆ ಜನರಿಗೆ ಕ್ರಮೇಣ ಅರಿವಾಗುತ್ತಿದ್ದು ಪ್ರಜಾಪ್ರಭುತ್ವದ ಮೌಲ್ಯ ಜನರಿಗೆ ಮುಟ್ಟಿಸಲು ಪದಾಧಿ ಕಾರಿಗಳಿಗೆ ಹೊಣೆಗಾರಿಕೆ ನೀಡಲಾಗಿದೆ ಎಂದರು.

ಇದನ್ನೂ ಓದಿ;- ಒಟಿಟಿಯಲ್ಲಿ “ರತ್ನನ ಪ್ರಪಂಚ”  | ಬಿಡುಗಡೆ ದಿನಾಂಕ ಘೋಷಣೆ

ಚುನಾವಣೆಯಲ್ಲಿ ಹಣದ ಆಮಿಷ ತೋರಿಸದೇ ಪ್ರಾಮಾಣಿಕವಾಗಿ ಮತ ಕೇಳುತ್ತಿದೆ. ತಮ್ಮನ್ನು ಎರಡುಚುನಾವಣೆಗಳಲ್ಲಿ ಜನರು ಸೋಲಿಸಿದರೂ ಜನರ ಬಳಿಗೆ ಹೋಗುವುದನ್ನು ನಿಲ್ಲಿಸದೇ, ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇವೆಂದರು. ಬಿಎಸ್‌ಪಿ ಮುಖಂಡರಾದ ಹರೀಶ್‌ ಜಗನ್ನಾಥ್‌, ಮುನಿಯಪ್ಪ, ಪೂಜಪ್ಪ, ಮೈಲಾರಪ್ಪ ಮತ್ತಿತರರಿದ್ದರು.ನೂತನ ಪದಾಧಿಕಾರಿಗಳು: ತಾಲೂಕು ಘಟಕ: ಕೆ.ವಿ. ಮುನಿಯಪ್ಪ – ತಾಲೂಕು ಉಸ್ತುವಾರಿ, ಹರೀಶ್‌ ಜಗನ್ನಾಥ್‌ – ತಾಲೂಕು ಅಧ್ಯಕ್ಷರು, ಪೂಜಪ್ಪ – ಉಪಾಧ್ಯಕ್ಷರು, ಎಂ.ಕೆ.ನರೇಂದ್ರಮೂರ್ತಿ – ಪ್ರಧಾನ ಕಾರ್ಯದರ್ಶಿ, ಎಸ್‌.ಸುರೇಶ – ಸಂಘಟನಾ ಕಾರ್ಯದರ್ಶಿ, ನಾಗರಾಜ…, ರಂಗನಾಥ್‌ ಅಕ್ಕತಮ್ಮನ ಹಳ್ಳಿ, ಪಾಪಣ್ಣ, ರಂಗನಾಥ್‌ ಕುರುಬರಹಳ್ಳಿ, ವಿಜಯ್‌ ಕುಮಾರ್‌, ಬೈರಸಂದ್ರ – ಕಾರ್ಯದರ್ಶಿಗಳು.

ತಾಲೂಕು ಮಹಿಳಾ ಘಟಕ: ಕಮಲಮ್ಮ -ತಾಲೂಕು ಅಧ್ಯಕ್ಷರು, ಫಾತಿಮಾ-ಉಪಾಧ್ಯಕ್ಷರು, ಮೀನಾಕ್ಷಮ್ಮ -ಪ್ರಧಾನ ಕಾರ್ಯದರ್ಶಿ. ನಗರ ಘಟಕ ಪದಾಧಿಕಾರಿಗಳು: ಶೋಯಬ್‌ ಖಾನ್‌ – ನಗರ ಅಧ್ಯಕ್ಷರು, ಮುಬಾರಕ್‌ ಶೇಕ್‌ – ಉಪಾಧ್ಯಕ್ಷರು, ಕರೀಂ ಪಾಷಾ-ಪ್ರಧಾನ ಕಾರ್ಯದರ್ಶಿ, ಅಪ್ರೂಜ್‌ ಪಾಷಾ, ನಯಾಜ್‌, ಮಕ್‌ ಸುದ್‌, ಮೌಲ, ಗೌತಮ್‌ – ಕಾರ್ಯದರ್ಶಿಗಳು.

Advertisement
Advertisement

Udayavani is now on Telegram. Click here to join our channel and stay updated with the latest news.

Next