Advertisement

ಎಂ.ಬಿ.ಪಾಟೀಲ್‌ರದ್ದು ವಿನಾಶ ಕಾಲೇ ವಿಪರೀತ ಬುದ್ಧಿ 

11:15 AM Sep 13, 2017 | |

ಬಾಗಲಕೋಟೆ: ಲಿಂಗಾಯತ ಸ್ವತಂತ್ರ ಧರ್ಮದ ಕುರಿತು ಸಿದ್ಧಗಂಗಾ ಶ್ರೀಗಳ ಹೆಸರು ಎಳೆತಂದ ವಿಚಾರಕ್ಕೆ ಸಚಿವ ಎಂ.ಬಿ.ಪಾಟೀಲ್‌ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಕಿಡಿ ಕಾರಿದ್ದಾರೆ. 

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ”ಎಂ.ಬಿ.ಪಾಟೀಲರದ್ದು ವಿನಾಶ ಕಾಲೇ ವಿಪರೀತ ಬುದ್ಧಿ. ಈ ವಿಚಾರದಲ್ಲಿ ಸಿದ್ದಗಂಗಾ ಶ್ರೀಗಳ ಹೆಸರು ಎಳೆತರಬಾರದಿತ್ತು.ಅವರ ಬಗ್ಗೆ  ಮಾತನಾಡಿದರೆ ಎಲ್ಲರೂ ಖಂಡಿಸುತ್ತಾರೆ. ಹೀಗಾಗಿ ಮೌನವಾಗಿದ್ದರೆ ಅವರಿಗೂ ಗೌರವ” ಎಂದರು.

ವೀರಶೈವ ಮಹಾಸಭಾ ನಿರ್ಧಾರಕ್ಕೆ ನಾವು ಬದ್ಧ 
”ಲಿಂಗಾಯತ ಸ್ವತಂತ್ರ ಧರ್ಮದ ವಿಚಾರದಲ್ಲಿ ವೀರಶೈವ ಮಹಾಸಭಾ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಈ ವಿಚಾರದಲ್ಲಿ ರಾಜಕೀಯ ಗೊಂದಲ ಸೃಷ್ಟಿಸುವುದು ಬೇಡ” ಎಂದರು. 

ಭ್ರಷ್ಟಾಚಾರದ ಚಾರ್ಜ್‌ ಶೀಟ್‌ ರೆಡಿ 

”ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಬಂಧುಗಳು ಮಾಡಿರುವ ಭ್ರಷ್ಟಾಚಾರದ ಕುರಿತಾಗಿನ ಚಾರ್ಜ್‌ ಶೀಟ್‌ ಸಿದ್ದಪಡಿಸಿದ್ದು ಮುಂದಿನ ನಾಲ್ಕಾರು ದಿನಗಳಲ್ಲಿ ಹಗರಣವನ್ನು ಬಯಲು ಮಾಡುತ್ತೇನೆ” ಎಂದು ಯಡಿಯೂರಪ್ಪ ಬಾಂಬ್‌ ಸಿಡಿಸಿದ್ದಾರೆ. 

Advertisement

ರಾಹುಲ್‌ರದ್ದು ತಿರುಕನ ಕನಸು 
”ಅಮೆರಿಕದಲ್ಲಿ ವಿದ್ಯಾರ್ಥಿಗಳ ಎದುರು ದೇಶದ ಮಾನ ಕಳೆದಿರುವ ರಾಹುಲ್‌ ಗಾಂಧಿ ಅವರು ಪ್ರಧಾನಿ ಯಾಗುವುದು ತಿರುಕ ಕಂಡ ಕನಸಿನಂತಿದೆ.ಅವರಿಗೆ ಸಾಮಾನ್ಯ ಜ್ಞಾನವಿಲ್ಲ. ಬಾಲಿಷವಾಗಿ ವರ್ತಿಸುತ್ತಿದ್ದಾರೆ” ಎಂದು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next