Advertisement

ಕ್ಷಮೆ ಕೇಳದ ಬ್ರಿಟನ್‌ ಪ್ರಧಾನಿ

11:50 PM Apr 10, 2019 | Team Udayavani |

ಲಂಡನ್‌: 1919 ರಲ್ಲಿ ಪಂಜಾಬ್‌ನ ಅಮೃತಸರದಲ್ಲಿ ನಡೆದ ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ಬ್ರಿಟಿಷ್‌ ಇಂಡಿಯನ್‌ ಇತಿಹಾಸದಲ್ಲಿ ಅವಮಾನಕರ ಕಲೆ ಎಂಬುದಾಗಿ ಬ್ರಿಟನ್‌ ಪ್ರಧಾನಿ ಥೆರೆಸಾ ಮೇ ಹೇಳಿದ್ದಾರೆ. ಆದರೆ ಮೇ ಕ್ಷಮೆ ಕೇಳಿಲ್ಲ. ಹತ್ಯಾಕಾಂಡ ನಡೆದು 100 ವರ್ಷವಾದ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಬಗ್ಗೆ ಕೇಳಿದ ಪ್ರಶ್ನೆಗೆ ಮೇ ಪ್ರತಿಕ್ರಿಯೆ ನೀಡಿದ್ದಾರೆ. ಇದು ಬ್ರಿಟಿಷ್‌ ಇಂಡಿಯಾದ ಇತಿಹಾಸದಲ್ಲಿ ಕಪ್ಪು ಚುಕ್ಕೆ ಎಂಬುದಾಗಿ ರಾಣಿ ಎರಡನೇ ಎಲಿಜಬೆತ್‌ 1997ರಲ್ಲಿ ಹೇಳಿದ್ದಾರೆ. ಈ ಘಟನೆ ಬಗ್ಗೆ ನನಗೆ ಖೇದವಿದೆ ಎಂದು ಮೇ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next