Advertisement

ದಾವೂದ್‌ನನ್ನು ಭಾರತಕ್ಕೆ ಕರೆತನ್ನಿ; ಪ್ರಧಾನಿ ಮೋದಿಗೆ ರೋಹಿತ್‌ ಪವಾರ್‌ ಮನವಿ

06:04 PM Aug 27, 2020 | mahesh |

ಪುಣೆ: ಭೂಗತ ಪಾತಕಿ, ಭಯೋತ್ಪಾದಕ ದಾವೂದ್‌ ಇಬ್ರಾಹಿಂನನ್ನು ಪಾಕಿಸ್ಥಾನದಿಂದ ಭಾರತಕ್ಕೆ ಮರಳಿ ಕರೆತರುವಂತೆ ಶರದ್‌ ಪವಾರ್‌ ಮತ್ತು ಅವರ ಮೊಮ್ಮಗ ರೋಹಿತ್‌ ಪವಾರ್‌ ಅವರು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದಾರೆ.

Advertisement

ಈ ಕುರಿತು ಟ್ವೀಟ್‌ ಮಾಡಿದ ರೋಹಿತ್‌ ಪವಾರ್‌, ದಾವೂದ್‌ ಇಬ್ರಾಹಿಂ ವಾಸ್ತವವಾಗಿ ಕರಾಚಿಯ ಲ್ಲಿದ್ದಾನೆ ಎಂದು ಪಾಕಿಸ್ಥಾನ ಒಪ್ಪಿ ಕೊಂಡಿದೆ. ಎಷ್ಟು ಖರ್ಚಾದರೂ ಪರವಾಗಿಲ್ಲ. ಆತನನ್ನು ಭಾರತಕ್ಕೆ ಕರೆತಂದು ನ್ಯಾಯಾಂಗಕ್ಕೆ ಒಪ್ಪಿಸಿ ಕಠಿನ ಶಿಕ್ಷೆ ನೀಡಬೇಕೆಂದು ಹೇಳಿದ್ದಾರೆ.

1993ರ ಮುಂಬಯಿ ಸ್ಫೋಟದ ಮಾಸ್ಟರ್‌ ಮೈಂಡ್‌ ಇಬ್ರಾಹಿಂ ಕರಾಚಿಯಲ್ಲಿ ಇರುವ ತಪ್ಪೊಪ್ಪಿಗೆಯನ್ನು ಪಾಕಿಸ್ಥಾನ ಅಲ್ಲಗಳೆದಿದೆ. ಡಿ ಕಂಪನಿಯ ರಿಂಗ್‌ ಲೀಡರ್‌ ತನ್ನ ದೇಶದಲ್ಲಿಲ್ಲ ಎಂದು ಅದು ಹೇಳಿದೆ. ಶನಿವಾರ ಸಂಜೆ ಪಾಕಿಸ್ಥಾನವು 88 ನಿಷೇಧಿತ ಭಯೋತ್ಪಾದಕ ಸಂಘಟನೆಗಳು ಮತ್ತು ದಾವೂದ್‌ ಇಬ್ರಾಹಿಂ ಸೇರಿದಂತೆ ಆತನ ಸಹಚರರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಟಿಸಿತು. ಈ ಪಟ್ಟಿಯಲ್ಲಿ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಹೆಸರನ್ನು ಸೇರಿಸುವ ಮೂಲಕ, ದಿ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ ತನ್ನ ದೇಶದಲ್ಲಿ ವಾಸಿಸುತ್ತಿ¨ªಾನೆ ಎಂದು ಪಾಕಿಸ್ಥಾನ ಒಪ್ಪಿಕೊಂಡಿತ್ತು ಎಂದು ಪವಾರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next