Advertisement

ಸಿಕ್ತು ದಶಕದ ನಂತರ ಸೇತುವೆ ಭಾಗ್ಯ!

02:07 PM May 29, 2022 | Team Udayavani |

ಸಿದ್ದಾಪುರ: ಸೇತುವೆ ಕಾಮಗಾರಿಯೊಂದು ಬರೋಬ್ಬರಿ ಒಂಭತ್ತು ವರ್ಷಗಳಿಂದ ಕುಂಟುತ್ತಾ ಸಾಗಿ ಅಂತೂ ಇಂತೂ ಪೂರ್ಣಗೊಂಡಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

Advertisement

ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಸಂಪಗೋಡ- ಭಂಡಾರಕೇರಿ ನಡುವೆ ಸಂಪರ್ಕ ಕೊಂಡಿಯಾಗಿ ರುವ ಹೊಸಗದ್ದೆ ಬಳಿ ಹರಿಯುವ ಹೊಳೆಗೆ ಸೇತುವೆ ನಿರ್ಮಾಣಕ್ಕೆ 2012-13ರಲ್ಲೇ ಮಲೆನಾಡು ಅಭಿವೃದ್ಧಿ ಯೋಜನೆಯಡಿ 5 ಲಕ್ಷ ರೂ. ಮಂಜೂರಾಗಿತ್ತು.

ನಾಲ್ಕು ಪಿಲ್ಲರ್‌ಗಳನ್ನಷ್ಟೇ ನಿರ್ಮಾಣ ಮಾಡಿ, 9 ವರ್ಷಗಳಿಂದ ಸೇತುವೆ ಕಾಮಗಾರಿ ಅಲ್ಲಿಗೆ ನಿಂತಿತ್ತು. ಇದರಿಂದ ಗ್ರಾಮಸ್ಥರಿಗೆ ಆಗುವ ಸಂಚಾರ ತಾಪತ್ರಯದ ಕುರಿತು, ಅಧಿಕಾರಿಗಳು- ಜನಪ್ರತಿನಿಧಿಗಳ ನಿರ್ಲಕ್ಷ್ಯದ ಕುರಿತು ಉದಯವಾಣಿಯು “ಜನರ ಸುಂಕಕ್ಕೆ ಬೆಲೆಯಿಲ್ಲ; ಗ್ರಾಮಸ್ಥರಿಗೆ ಸಂಕವಿಲ್ಲ’ ಎಂಬ ಶೀರ್ಷಿಕೆಯಡಿ 2021ರ ಸೆ.5ರಂದು ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ಇದೀಗ ಗ್ರಾಮಸ್ಥರ ದಶಕದ ಕಾಯುವಿಕೆ ಅಂತ್ಯವಾಗಿದೆ. 2ನೇ ಹಂತದಲ್ಲಿ ಎರಡು ವರ್ಷಗಳ ಹಿಂದೆ ಮಲೆನಾಡು ಅಭಿವೃದ್ಧಿ ಯೋಜನೆಯಡಿ 5 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಸೇತುವೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಉಮಾ ಹೆಗಡೆ ಸೇರಿದಂತೆ ಗ್ರಾಮಸ್ಥರ ಸತತ ಹಕ್ಕೊತ್ತಾಯ ಫಲ ನೀಡಿದ್ದು, ಪಿಲ್ಲರ್‌ಗಳ ಮೇಲೆ ಸ್ಲ್ಯಾಬ್‌ ಹಾಕಲಾಗಿದೆ. ಮಳೆಗಾಲದ ಹೊಸ್ತಿಲಲ್ಲಿ ಜನರ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next