Advertisement

ಬ್ರಿಡ್ಜ್ ಕಂ.ಬ್ಯಾರೇಜ್‌ ಕಾಮಗಾರಿ ವೀಕ್ಷಣೆ

01:02 PM Jan 29, 2020 | Team Udayavani |

ರಾಮದುರ್ಗ: ತಾಲೂಕಿನ ಸಂಗಳ ಗ್ರಾಮದ ಹತ್ತಿರ ಮಲಪ್ರಭಾ ನದಿಗೆ ನಿರ್ಮಿಸಿದ ಬ್ರಿಡ್ಜ್ ಕಂ. ಬ್ಯಾರೇಜ್‌ನ್ನು ಶಾಸಕ ಮಹಾದೇವಪ್ಪ ಯಾದವಾಡ, ಸ್ಥಳೀಯ ಮುಖಂಡರು ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿದರು.

Advertisement

ಮೊದಲು ನಿರ್ಮಾಣ ಮಾಡಿದ ಬ್ರಿಡ್ಜ್ ಕಂ. ಬ್ಯಾರೇಜ್‌ ನೆಲಮಟ್ಟಕ್ಕಿದೆ. ನದಿ ಬದಿ ತುಂಬಾ ಎತ್ತರದಲ್ಲಿದೆ. ಅದಕ್ಕೆ ತಕ್ಕಂತೆ ಬ್ರಿಡ್ಜ್ ನಿರ್ಮಿಸಿ, ಬ್ರಿಡ್ಜ್ ನ  ಹಿಂದೆ ಹಾಗೂ ಮುಂದಿನ ನದಿಯಲ್ಲಿ ತುಂಬಿಕೊಂಡ ಹೂಳು ತೆಗೆಯಬೇಕಾದ ಅಗತ್ಯತೆ ಇದ್ದು, ಅಗಲೀಕರಣ ಮಾಡುವ ಸಂದರ್ಭದಲ್ಲಿ ಗುತ್ತಿಗೆದಾರರಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಹಾಗೂ ಜಮೀನುಗಳ ಮಾಲೀಕರು ಸಹಕಾರ ನೀಡಬೇಕು. ಗ್ರಾಮದ ಸ್ಥಳೀಯ ಮುಖಂಡರು ಜವಾಬಾœರಿ ತೆಗೆದುಕೊಂಡು ನದಿ ಹೂಳೆತ್ತಿ, ಎತ್ತರದ ಬ್ರಿಡ್ಜ್ ನಿರ್ಮಾಣ ಕಾಮಗಾರಿ ಪರಸ್ಪರರು ಸಹಕಾರ ನೀಡಿದಲ್ಲಿ ಮಾತ್ರ ಯೋಜಿತ ಉದ್ದೇಶ ಈಡೇರಲು ಸಾಧ್ಯವಿದೆ ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ ಎಂ. ಎನ್‌. ಭಜಂತ್ರಿ ಅವರಿಗೆ ನವೀಕರಣ ಹಾಗೂ ನದಿ ಹೂಳೆತ್ತಲು ಕ್ರಿಯಾ ಯೋಜನೆ ಸಿದ್ಧಪಡಿಸಿಸರಕಾರಕ್ಕೆ ಸಲ್ಲಿಸುವಂತೆ ಸೂಚನೆ ನೀಡಿದರು. ಈ ಕುರಿತು ಸಣ್ಣ ನೀರಾವರಿ ಇಲಾಖೆಯ ಸಚಿವರೊಂದಿಗೆ ಚರ್ಚಿಸಿ ಕಾಮಗಾರಿಗೆ ಅಗತ್ಯ ಅನುದಾನ ಬಿಡುಗಡೆಗೆ ಒತ್ತಾಯಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಗ್ರಾಮದ ಮುಖಂಡರಾದ ಬಸಣ್ಣ ಕುದರಿ, ಮಲ್ಲಣ್ಣ ಅಂಗಡಿ, ರಾಯನಗೌಡ ಗೌಡ್ರ, ಎಸ್‌.ಎ. ಸಂಗಳಮಠ, ಚೆನ್ನಪ್ಪಗೌಡ್ರ ಸೇರಿದಂತೆ ಗ್ರಾಮಸ್ಥರು ಹಾಗೂ ಗ್ರಾ.ಪಂ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next