Advertisement

ಇನ್ನೇನು ಫ‌ಸ್ಟ್‌ನೈಟ್‌ ಅನ್ನುವಷ್ಟರಲ್ಲಿ ವಧುವಿನ ಕಿಡ್ನ್ಯಾಪ್‌ !

10:41 AM Oct 11, 2018 | |

ಕೊಪ್ಪಳ: ಸಡಗರದಿಂದ ಮದುವೆ ಮುಗಿದಿತ್ತು ಇನ್ನೇನು ಪ್ರಥಮ ರಾತ್ರಿಯ ಸಂಭ್ರಮ ಎನ್ನುವಷ್ಟರಲ್ಲಿ ವಧುವನ್ನು ಕಿಡ್ನ್ಯಾಪ್‌ ಮಾಡಿದ ಘಟನೆ ಗಂಗಾವತಿಯ ಗುಡೂರು ಎಂಬಲ್ಲಿ ನಡೆದಿದೆ. 

Advertisement

15 ದಿನಗಳ ಹಿಂದೆ ಮಲ್ಲನ ಗೌಡ ಎನ್ನುವ ಯುವಕನೊಂದಿಗೆ ಗಾಯತ್ರಿ ಎಂಬಾಕೆಯ ವಿವಾಹ  ಗುರು ಹಿರಿಯರ ಸಮ್ಮುಖದಲ್ಲಿ ನಡೆದಿತ್ತು. ಮದುವೆಯ ಬಳಿಕ ಪ್ರಥಮ ರಾತ್ರಿಗೂ ಎಲ್ಲಾ ಸಿದ್ಧತೆಯಾಗಿತ್ತು. ದುರಂತವೆಂದರೆ ವಧು ಶೌಚಾಲಯಕ್ಕೆಂದು ಮನೆಯಿಂದ ಹೊರ ಬಂದ ವೇಳೆ ಹೊಂಚು ಹಾಕಿ ಕುಳಿತಿದ್ದ 6 ಮಂದಿ ಕಿಡ್ನ್ಯಾಪ್‌ ಮಾಡಿ ಕಾರಿನಲ್ಲಿ  ಎಳೆದೊಯ್ದಿದ್ದಾರೆ. ಮನೆಯವರು ಬಿಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಪೊಲೀಸರಿಗೆ ತಿಳಿಸಲಾಗಿದೆ. 

ಸೋಮನಾಳ ಗ್ರಾಮದ ಅಂಜು ಕುಮಾರ್‌ ರೆಡ್ಡಿ ಎನ್ನುವನ್ನು ತನ್ನ ಸಹಚರರೊಂದಿಗೆ ಗಾಯತ್ರಿಯನ್ನು ಕಿಡ್ನ್ಯಾಪ್‌ ಮಾಡಿದ್ದಾನೆ ಎನ್ನಲಾಗಿದೆ. 

ಕಾರಟಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಆರೋಪಿಗಳನ್ನು ಬಂಧಿಸುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರನ ಮನೆಯವರು ಆರೋಪಿಸಿದ್ದಾರೆ. 

ಒಟ್ಟಿನಲ್ಲಿ ಪ್ರಕರಣ ಹಲವು ಅನುಮಾನಗಳಿಕೆ ಕಾರಣವಾಗಿದೆ. ವರ ಮತ್ತು ಮನೆಯವರಿಗೆ ಬರ ಸಿಡಿಲು ಬಡಿದಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next