Advertisement

ನಿವೇಶನದ ಕ್ರಯಪತ್ರ ನೋಂದಣಿಗೆ ಲಂಚ: ಅಧಿಕಾರಿ ಎಸಿಬಿ ಬಲೆಗೆ

11:46 AM Apr 06, 2019 | Team Udayavani |

ಬೆಂಗಳೂರು: ನಿವೇಶನದ ಕ್ರಯಪತ್ರ ನೋಂದಣಿಗಾಗಿ ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಚಿಕ್ಕಜಾಲ ಹೋಬಳಿಯ ಚಿಕ್ಕಜಾಲ ಉಪ ನೋಂದಾಣಾಧಿಕಾರಿಯನ್ನು ಭ್ರಷ್ಟಚಾರ ನಿಗ್ರಹದಳ ಅಧಿಕಾರಿಗಳು ಬಂಧಿಸಿದ್ದಾರೆ. ಚಿಕ್ಕಜಾಲ ಉಪ ನೋಂದಾಣಾಧಿಕಾರಿ ಭಾಸ್ಕರ ಸಿದ್ರಾಮಪ್ಪ ಚೌರ, ಎಸಿಬಿ ಪೊಲೀಸರ ಬಲೆಗೆ ಬಿದ್ದಿರುವ ಅಧಿಕಾರಿಯಾಗಿದ್ದಾರೆ. ಶುಕ್ರವಾರ ದೂರುದಾರರಿಂದ ಸಿದ್ರಾಮಪ್ಪ ಚೌರ 15 ಸಾವಿರ ರೂ.ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಹಣ ಸಮೇತ ಸಿಕ್ಕಿ ಬಿದ್ದಿದ್ದಾರೆ. ಈ ಸಂಬಂಧ ಎಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next