Advertisement

ಬಿಎಸ್‌ವೈ ಜತೆ ಮುನಿಸು: ಈಶ್ವರಪ್ಪ ದ್ವಂದ್ವ ಹೇಳಿಕೆ

11:27 AM May 16, 2017 | Harsha Rao |

ಬಾಗಲಕೋಟೆ: ತಮ್ಮ ಹಾಗೂ ಬಿ.ಎಸ್‌. ಯಡಿಯೂರಪ್ಪ ಮಧ್ಯೆ ಇರುವ ಸಂಘರ್ಷದ ಕುರಿತು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ದ್ವಂದ್ವ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ತಾಲೂಕಿನ ಖಜ್ಜಿಡೋಣಿ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಕೆ.ಎಸ್‌. ಈಶ್ವರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಮತ್ತು ಯಡಿಯೂರಪ್ಪ ನಡುವಣ ಸಂಘರ್ಷ ಸದ್ಯ ಮುಗಿದಿದೆ. ಮುಂದಿನ ಚುನಾವಣೆ, ಸಾಮೂಹಿಕ ನಾಯಕತ್ವದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಆಗುತ್ತಾರೆ. ಅವರೇ ನಮ್ಮ ನಾಯಕರು ಎಂದು
ಹೇಳಿದರು. ಬಳಿಕ ಯಡಿಯೂರಪ್ಪ ಮತ್ತು ತಮ್ಮ ಮಧ್ಯದ ಸಂಘರ್ಷ ಬರುವ ಚುನಾವಣೆ ಒಳಗೆ ಬಗೆಹರಿಯಬಹುದು. ಇಲ್ಲವೇ, ಮುಂದಿನ ಚುನಾವಣೆವರೆಗೂ ಮುಂದುವರಿಯಬಹುದು ಎಂಬ ಅಚ್ಚರಿಯ ಹೇಳಿಕೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next