Advertisement

ಪೌರ ಕಾರ್ಮಿಕರಿಗೆ ಉಪಾಹಾರ

06:08 AM May 29, 2020 | Team Udayavani |

ಬೆಳಗಾವಿ: ಲಾಕ್‌ಡೌನ್‌ ವೇಳೆ ಎರಡು ತಿಂಗಳಿಂದ ಜೀವದ ಹಂಗು ಲೆಕ್ಕಿಸದೇ ನಗರದಲ್ಲಿ ಸ್ವಚ್ಛತೆ ಕಾಪಾಡುತ್ತಿರುವ ಪೌರ ಕಾರ್ಮಿಕರಿಗೆ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಉಪಾಹಾರ ನೀಡಿ ಗೌರವಿಸಿದರು.

Advertisement

ಎಲ್ಲ ಪೌರ ಕಾರ್ಮಿಕರನ್ನು ಉಪಾಹಾರಕ್ಕೆ ಆಹ್ವಾನಿಸಿದ ಶಾಸಕ ಅಭಯ ಪಾಟೀಲರು, ಉಪಾಹಾರ ಉಣಬಡಿಸಿದರು. ಜತೆಗೆ ತಾವೂ ಅವರೊಂದಿಗೆ ಉಪಾಹಾರ ಸವಿದರು. ಸುಮಾರು 600 ಪೌರ ಕಾರ್ಮಿಕರು ನಗರದ ಮಹಾವೀರ ಭವನದಲ್ಲಿ ಜಮಾಯಿಸಿದ್ದರು. ಎಲ್ಲ ಪೌರ ಕಾರ್ಮಿಕರೊಂದಿಗೆ ಕೆಲ ಹೊತ್ತು ಸಮಯ ಕಳೆದರು.

ಎರಡು ತಿಂಗಳಿಂದ ಸ್ವಚ್ಛತೆಗೆ ಶ್ರಮ ವಹಿಸಿ ದುಡಿಯುತ್ತಿರುವ ಪೌರ ಕಾರ್ಮಿಕರ ಸಮಸ್ಯೆ ಆಲಿಸಿದ ಶಾಸಕ ಅಭಯ, ನಂತರ ಪ್ರತಿಯೊಬ್ಬ ಪೌರ ಕಾರ್ಮಿಕರಿಗೂ ಆಹಾರದ ಕಿಟ್‌ ನೀಡಿ ಬೀಳ್ಕೊಟ್ಟರು. ಈ ವೇಳೆ ಮಾತನಾಡಿದ ಶಾಸಕ ಅಭಯ ಪಾಟೀಲ, ಲಾಕ್‌ಡೌನ್‌ ವೇಳೆ ಬೆಳಗಾವಿಯ ಪೌರ ಕಾರ್ಮಿಕರು ನಿರಂತರ ಕೆಲಸ ಮಾಡಿದ್ದಾರೆ. ಸ್ವಚ್ಛತೆಗಾಗಿ ಸಮಯವನ್ನೂ ಲೆಕ್ಕಿಸದೇ ದುಡಿಯುತ್ತಿದ್ದಾರೆ. ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಕೊಡುಗೆ ಅಪಾರ. ವೈದ್ಯರು, ಪ್ಯಾರಾ ಮೆಡಿಕಲ್‌ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರಂತೆಯೇ ಕೊರೊನಾ ವಾರಿಯರ್ಸ್‌ಗಳಾಗಿ ಪೌರ ಕಾರ್ಮಿಕರು ದುಡಿಯುತ್ತಿದ್ದಾರೆ. ಈ ಕಾರ್ಮಿಕರ ಸೇವೆ ನಿಜಕ್ಕೂ ಅಮೂಲ್ಯವಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next