Advertisement

ಬ್ರಹ್ಮಾವರ: ಗೋ ಕಳವು ವಿರುದ್ಧ ಪ್ರತಿಭಟನೆ

02:00 AM Jul 04, 2019 | Team Udayavani |

ಬ್ರಹ್ಮಾವರ: ಅಕ್ರಮ ಗೋ ಸಾಗಾಣಿಕೆ ಹಾಗೂ ಹಿಂದೂ ಪರ ಸಂಘಟನೆ ಕಾರ್ಯಕರ್ತರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಬ್ರಹ್ಮಾವರ ಪ್ರಖಂಡದ ಆಶ್ರಯದಲ್ಲಿ ಬೃಹತ್‌ ಪ್ರತಿಭಟನೆ ಬುಧವಾರ ಬ್ರಹ್ಮಾವರ ತಹಶೀಲ್ದಾರ್‌ ಕಚೇರಿ ಎದುರು ನಡೆಯಿತು.

Advertisement

ವಿಹಿಂಪ ಮಾಜಿ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ್‌ ಶೆಟ್ಟಿ ಮಾತನಾಡಿ, ಗೋವು ಹಿಂದೂ ಸಮಾಜದ ಭಾವನೆಯ ಪ್ರತೀಕ. ಗೋವು ತಾಯಿ, ದೇವರಿಗೆ ಸಮಾನ. ಅಕ್ರಮ ಗೋ ಸಾಗಾಟ, ಕೊಟ್ಟಿಗೆಯಲ್ಲಿರುವ ಗೋವುಗಳ ದರೋಡೆಯು ಕೋಮು ಸಂಘರ್ಷಕ್ಕೆ ಎಡೆ ಮಾಡುತ್ತಿದೆ. ಸರಕಾರ, ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಗೋಸಂರಕ್ಷಣೆಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.

ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಕಾರ್ಯದರ್ಶಿ ಪ್ರಮೋದ್‌ ಮಂದಾರ್ತಿ ಮಾತನಾಡಿ, ಅಕ್ರಮ ಗೋ ಸಾಗಾಟ ತಡೆದವರ ಮೇಲೆಯೇ ಕೇಸುಗಳನ್ನು ಹಾಕುತ್ತಿರುವುದು ನ್ಯಾಯವೇ. ಗೋ ಮಾತೆಯ ಮೇಲಿನ ಸವಾರಿಗೆ ಜಿಲ್ಲಾ ಡಳಿತವೇ ಹೊಣೆಯಾಗುತ್ತದೆ ಎಂದರು.

ಗೋವಿಗೆ ಶ್ರೇಷ್ಠವಾದ, ಪೂಜನೀಯ ಸ್ಥಾನವಿದೆ. ಗೋ ಸಂರಕ್ಷಣೆಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ಶೀಲಾ ಕೆ. ಶೆಟ್ಟಿ ಹೇಳಿದರು.

ಈ ಸಂದರ್ಭ ಬ್ರಹ್ಮಾವರ ತಹಶೀಲ್ದಾರ್‌ ಕಿರಣ್‌ ಗೋರಯ್ಯ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಪ್ರಮುಖರಾದ ಯತೀಶ್‌ ವಾರಂಬಳ್ಳಿ, ರವಿ ಕೊಳಂಬೆ, ರಾಘವೇಂದ್ರ ಕೊಳಂಬೆ, ಸದಾನಂದ ಸೂರಾಲು, ರವಿ ಶೆಟ್ಟಿ, ಅರುಣ್‌ ಭಂಡಾರಿ, ನಳಿನಿ ಪ್ರದೀಪ್‌ ರಾವ್‌, ರಾಘವೇಂದ್ರ ಉಪ್ಪೂರು, ಸಂತೋಷ್‌ ಹಂದಾಡಿ, ಹರೀಶ್‌ ಮಟಪಾಡಿ, ರಘುಪತಿ ಬ್ರಹ್ಮಾವರ, ವೀಣಾ ನಾಯಕ್‌, ಉದಯ ಮಠದಬೆಟ್ಟು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next