Advertisement

Brahmavara: ಗುಂಡಿಕ್ಕಿ ವ್ಯಕ್ತಿಯ ಬರ್ಬರ ಹತ್ಯೆ

01:01 AM Mar 04, 2024 | Team Udayavani |

ಬ್ರಹ್ಮಾವರ: ಬಾರಕೂರು ಹನೆಹಳ್ಳಿ ಬಾಳೆ ಹಿತ್ಲಿನಲ್ಲಿ ಕೃಷ್ಣ (37) ಅವರನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿದೆ.

Advertisement

ಸೆಂಟ್ರಿಂಗ್‌ ಕೆಲಸ ಮಾಡಿಕೊಂಡಿದ್ದ ಕೃಷ್ಣ ವಿವಾಹಿತರಾಗಿದ್ದರೂ ಮನೆಯಲ್ಲಿ ಒಬ್ಬರೇ ವಾಸವಿದ್ದರು ಎಂದು ತಿಳಿದು ಬಂದಿದೆ. ಶನಿವಾರ ರಾತ್ರಿ 9.30ರ ಹೊತ್ತಿಗೆ ಗುಂಡಿನ ಶಬ್ದವಾದರೂ ನೆರೆಕರೆಯವರು ಅಷ್ಟೊಂದು ಗಮನ ಹರಿಸಿರಲಿಲ್ಲ. ರವಿವಾರ ಬೆಳಗ್ಗೆ ಕೃಷ್ಣ ಅವರ ಸ್ನೇಹಿತ ಮನೆಗೆ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯ ಜಗಲಿಯ ಮೇಲೆ ಮೃತದೇಹ ಕಂಡುಬಂದಿದ್ದು, ತಲೆಗೆ ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಸ್ಥಳದಲ್ಲಿ ಗುಂಡಿನ 3 ಖಾಲಿ ಕವರ್‌ ದೊರಕಿದೆ.

ಹಾಗೇ ಉಳಿದ ಊಟ
ಕೃಷ್ಣ ಹೆಚ್ಚಿನ ದಿನ ರಾತ್ರಿ ಹೊಟೇಲ್‌ನಿಂದ ಊಟ ಪಾರ್ಸೆಲ್‌ ತರುತ್ತಿದ್ದು, ಶನಿವಾರ ಕೂಡ ತಂದಿದ್ದರು. ತಂದಿದ್ದ ಪಾರ್ಸೆಲ್‌ ಹಾಗೆಯೇ ಇತ್ತು. ಮೃತರು ಪತ್ನಿಯನ್ನು ಅಗಲಿದ್ದಾರೆ.

ಮೃದು ಸ್ವಭಾವದವರುಕೃಷ್ಣ ಅವರು ನೆರೆಕರೆ ಯವ ರೊಂದಿಗೆ ಸೌಹಾರ್ದದಿಂದ ಇದ್ದರು. ಯಾರೊಂದಿಗೂ ದ್ವೇಷ ಕಟ್ಟಿ ಕೊಂಡವ ರಲ್ಲ ಎಂದು ತಿಳಿದು ಬಂದಿದೆ. ಎಸ್‌ಪಿ ಡಾ| ಅರುಣ್‌ ಕೆ., ವೃತ್ತ ನಿರೀಕ್ಷಕ ದಿವಾಕರ್‌ ಪಿ.ಎಂ., ಠಾಣಾಧಿ ಕಾರಿ ಮಧು ಬಿ.ಇ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೂರು ತಂಡ ರಚನೆ
ಪ್ರಕರಣದ ಹಿನ್ನೆಲೆಯಲ್ಲಿ ಮೂರು ಪ್ರತ್ಯೇಕ ತಂಡ ರಚಿಸಿ ಕಾರ್ಯಪ್ರವೃತ್ತರಾಗಿದ್ದೇವೆ. ಬೆರ ಳಚ್ಚು ತಜ್ಞರು, ಸ್ಥಳದಲ್ಲಿ ಪರಿ ಶೀಲನೆ, ಪೂರ್ವಾಪರ ಹಿನ್ನೆಲೆ ಸಹಿತ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ವೈಯಕ್ತಿಕ ವಿಚಾರದಲ್ಲಿ ಘಟನೆ ನಡೆ ದಿರುವ ಸಂಶಯವಿದೆ. ಆದಷ್ಟು ಶೀಘ್ರ ಪ್ರಕರಣ ಭೇದಿಸುತ್ತೇವೆ ಎಂದು ಎಸ್‌ಪಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next