Advertisement

ಬ್ರಹ್ಮಾವರ : ಗೃಹ ಪ್ರವೇಶಕ್ಕೆ ಬಂದಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

12:59 AM Feb 05, 2023 | Team Udayavani |

ಬ್ರಹ್ಮಾವರ : ಚೇರ್ಕಾಡಿ ಕುಧ್ಕುಂಜೆಯಲ್ಲಿ ಗೃಹ ಪ್ರವೇಶಕ್ಕೆ ಆಗಮಿಸಿದ್ದ ರವಿರಾಜ್‌ ಟಿ. ಶೆಟ್ಟಿ (59) ಗುರುವಾರ ಮೃತಪಟ್ಟಿದ್ದಾರೆ.

Advertisement

ಎದೆ ನೋವು ಕಾಣಿಸಿಕೊಂಡ ಅವರನ್ನು ಬ್ರಹ್ಮಾವರ, ಬಳಿಕ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು ಈ ವೇಳೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಅವರು ಹೃದಯಾಘಾತ ಅಥವಾ ದೈಹಿಕ ಕಾಯಿಲೆಯಿಂದ ಮೃತಪಟ್ಟಿರುವುದಾಗಿ ಬ್ರಹ್ಮಾವರ ಠಾಣೆಗೆ ದೂರು ನೀಡಲಾಗಿದೆ.
**
ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
ಬ್ರಹ್ಮಾವರ: ಚೇರ್ಕಾಡಿ ಸೋಣೆಕೊಡಿಯ ಸುಗಂಧಿ ಶೆಟ್ಟಿ (58) ಅವರು ಶನಿವಾರ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಸುಮಾರು 15 ವರ್ಷಗಳಿಂದ ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next