Advertisement

Brahmavar: ಮಗನಿಂದಲೇ ತಂದೆಯ ಬರ್ಬರ ಹತ್ಯೆ

07:07 PM Oct 08, 2023 | Team Udayavani |

ಬ್ರಹ್ಮಾವರ: ಮಗನೇ ತಂದೆಯನ್ನು ಕೊಲೆಗೈದ ಘಟನೆ ಶನಿವಾರ ಕೊಕ್ಕರ್ಣೆ ಸಮೀಪ ಮೊಗವೀರಪೇಟೆಯಲ್ಲಿ ನಡೆದಿದೆ. ಸಾಧು ಮರಕಾಲ(68) ಕೊಲೆಯಾದವರು. ಆರೋಪಿ ಪುತ್ರ ಆನಂದನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

Advertisement

ಸಾಧು ಮರಕಾಲರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ. ತಂದೆ ಸಾಧು ಮನೆ ಬಿಟ್ಟು ಹೋಗುವಂತೆ ಆನಂದ ಯಾವಾಗಲೂ ಮನೆಯಲ್ಲಿ ಗಲಾಟೆ ಮಾಡುತ್ತಿದ್ದು ಅದರಂತೆ ಶನಿವಾರ ಬೆಳಗ್ಗೆ ಇಬ್ಬರ ನಡುವೆ ಜಗಳವಾಗಿತ್ತು. ಮಧ್ಯಾಹ್ನದ ವೇಳೆ ಆನಂದ ತಂದೆಯನ್ನು ಕತ್ತಿಯಿಂದ ಕಡಿದಿದ್ದು ಮನೆ ಹಿಂಬದಿ ಓಣಿಯಲ್ಲಿ ಗಾಯಗೊಂಡು ಬಿದ್ದಿದ್ದರು. ಸ್ವಲ್ಪ ಸಮಯ ಯಾರೂ ಗಮನಿಸದೆ ತೀವ್ರ ರಕ್ತಸ್ರಾವವಾಗಿದೆ. ಅನಂತರ ತಿಳಿದು ಆಸ್ಪತ್ರೆಗೆ ಕರೆದೊಯ್ದರೂ ಸಾಧು ಮೃತಪಟ್ಟಿದ್ದಾರೆ.

ಆನಂದ ಮೀನುಗಾರಿಕೆ ಕೆಲಸಕ್ಕೆ ಮಲ್ಪೆಗೆ ತೆರಳುತ್ತಿದ್ದು, ಪತ್ನಿ ತನ್ನ ತಾಯಿಮನೆಯಲ್ಲಿ ನೆಲೆಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next