Advertisement

ಬ್ರಹ್ಮಚಾರಿಗೆ ಮತ್ತೊಬ್ಬ ಚೆಲುವೆ ಸಿಕ್ಕಳು…

09:06 AM Apr 30, 2019 | Lakshmi GovindaRaju |

ನಟ ನೀನಾಸಂ ಸತೀಶ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸಚಿತ್ರ ಬ್ರಹ್ಮಚಾರಿ ಅನೌನ್ಸ್‌ ಆದ ಸುದ್ದಿಯನ್ನು ಇದೇ ಬಾಲ್ಕನಿಯಲ್ಲಿ ನೋಡಿರುತ್ತೀರಿ. ಈಗ ಬ್ರಹ್ಮಚಾರಿ ಚಿತ್ರದ ಕಡೆಯಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಅದೇನೆಂದರೆ, ಬ್ರಹ್ಮಚಾರಿ ಗೆಟಪ್‌ನಲ್ಲಿರುವ ನಟ ಸತೀಶ್‌ಗೆ ಇಬ್ಬರು ಚೆಲುವೆಯರು ನಾಯಕಿಯರಾಗಿ ಜೋಡಿಯಾಗುತ್ತಿದ್ದಾರೆ.

Advertisement

ಹೌದು, ಈಗಾಗಲೇ ಬ್ರಹ್ಮಚಾರಿ ಚಿತ್ರಕ್ಕೆ ಒಬ್ಬ ನಾಯಕಿಯಾಗಿ ಅದಿತಿ ಪ್ರಭುದೇವ ಆಯ್ಕೆಯಾಗಿದ್ದಾರೆ. ಈಗ ಚಿತ್ರದ ಮತ್ತೊಬ್ಬ ನಾಯಕಿಯ ಜಾಗಕ್ಕೆ ಅಕ್ಷತಾ ಶ್ರೀನಿವಾಸ್‌ ಎನ್ನುವ ಹೊಸ ಹುಡುಗಿಯ ಎಂಟ್ರಿಯಾಗಿದೆ. ಅಂದಹಾಗೆ, ಅಕ್ಷತಾ ಶ್ರೀನಿವಾಸ್‌ ಮೂಲತಃ ಮಂಗಳೂರಿನವರು.

ತಮ್ಮ ಇಂಜಿನಿಯರಿಂಗ್‌ ಪದವಿ ಮುಗಿದ ಬಳಿಕ ಮಾಡೆಲಿಂಗ್‌ನತ್ತ ಮುಖ ಮಾಡಿದ್ದ ಅಕ್ಷತಾ, ಬಳಿಕ ಮಳೆ, ಧೈರ್ಯಂ, ಲೌಡ್‌ ಸ್ಪೀಕರ್‌, ಪರಸಂಗ ಹೀಗೆ ಕೆಲ ಚಿತ್ರಗಳಲ್ಲಿ ಸಹ ನಟಿಯಾಗಿ ಅಭಿನಯಿಸಿದ್ದರು. ಬ್ರಹ್ಮಚಾರಿ ಚಿತ್ರತಂಡ ನಡೆಸಿದ ಆಡಿಷನ್‌ನಲ್ಲಿ ಅಕ್ಷತಾ ಶ್ರೀನಿವಾಸ್‌ ಚಿತ್ರದ ಎರಡನೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಸದ್ಯ ಚಂದ್ರಮೋಹನ್‌ ನಿರ್ದೇಶನದ ಬ್ರಹ್ಮಚಾರಿ ಚಿತ್ರದಲ್ಲಿ ಅಕ್ಷತಾ ಗ್ಲಾಮರಸ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅಕ್ಷತಾ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ. ಇನ್ನೊಂದೆಡೆ ಚಿರಂಜೀವಿ ಸರ್ಜಾ ನಟಿಸುತ್ತಿರುವ,

ಧೈರ್ಯಂ ಖ್ಯಾತಿಯ ಶಿವತೇಜಸ್‌ ನಿರ್ದೇಶನ ಇನ್ನೂ ಹೆಸರಿಡದ ಹೊಸ ಚಿತ್ರದಲ್ಲೂ ಅಕ್ಷತಾ ಸಹ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಕ್ಷತಾ ಆರ್ಯವೇದಿಕ್‌ ಡಾಕ್ಟರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕಳೆದ ವಾರವಷ್ಟೇ ಈ ಚಿತ್ರದ ಮುಹೂರ್ತ ಸಮಾರಂಭ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next