Advertisement

ಮನಸ್ತಾಪದಿಂದ ಕೊಲೆ

12:34 AM Aug 01, 2019 | mahesh |

ಕೊಡೈಕೆನಲ್: ತಮಿಳುನಾಡಿನ ಕೊಡೈಕೆನಲ್ನಲ್ಲಿರುವ ರೆಸಿಡೆನ್ಶಿಯಲ್ ಶಾಲೆಯಲ್ಲಿ ವಿದ್ಯಾರ್ಥಿಗಳಿಬ್ಬರ ನಡುವಿನ ಸಣ್ಣ ಜಗಳ ಕೊಲೆಯಲ್ಲಿ ಮುಕ್ತಾಯವಾಗಿದೆ. ಅಸುನೀಗಿದ ವಿದ್ಯಾರ್ಥಿ ಕೃಷ್ಣಗಿರಿ ಜಿಲ್ಲೆಯ ಹೊಸೂರ್‌ಗೆ ಸೇರಿದಾತ. ಸ್ಟಂಪ್‌ ಮತ್ತು ಬ್ಯಾಟ್ನಿಂದ ಹೊಡೆದು ಮತ್ತು ಕತ್ತರಿಯಿಂದ ಚುಚ್ಚಿ ಹತ್ತನೇ ತರಗತಿಯ ವಿದ್ಯಾರ್ಥಿ ಈ ಕೃತ್ಯವೆಸಗಿದ್ದಾನೆ. ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ದಿಂಡಿಗಲ್ ಸರ್ಕಾರಿ ಆಸ್ಪತ್ರೆಗೆ ಶಿಕ್ಷಕರು ಕರೆದೊಯ್ದರು. ವೈದ್ಯರು ಆತನನ್ನು ಪರಿಶೀಲಿಸಿ, ಮೃತಪಟ್ಟಿದ್ದಾನೆ ಎಂದು ಘೋಷಿಸಿದರು. ದೇಹದ ಹಲವು ಭಾಗಗಳಲ್ಲಿ ಆತನಿಗೆ ಗಾಯಗಳಾಗಿದ್ದವು. ಇತ್ತೀಚಿನ ದಿನಗಳಿಂದ ಇಬ್ಬರ ನಡುವೆ ಸಣ್ಣ ವಿಚಾರಕ್ಕೆ ಮನಸ್ತಾಪ ಇತ್ತು ಮತ್ತು ಇಬ್ಬರೂ ಮಾತನಾಡುತ್ತಿರಲಿಲ್ಲ. ಕೃತ್ಯವೆಸಗಿದ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Advertisement

ಐ.ಡಿ.ಕಾರ್ಡ್‌ನಲ್ಲಿ ಜಾತಿ ವಿವರ
ತಿರುಚ್ಚಿಯ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗಿರುವ ಐ.ಡಿ.ಕಾರ್ಡ್‌ನಲ್ಲಿ ಜಾತಿ ವಿವರ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ಕಾರ್ಡ್‌ನಲ್ಲಿ ಇರುವ ಕ್ಯೂ.ಆರ್‌.ಕೋಡ್‌ ಅನ್ನು ಸ್ಕ್ಯಾನ್‌ ಮಾಡಿದಾಗ ವಿದ್ಯಾರ್ಥಿಯ ಜಾತಿ ಮತ್ತು ಉಪ ಜಾತಿಯ ವಿವರ ಲಭ್ಯವಾಗುತ್ತಿದೆ. ಈ ಬಗ್ಗೆ ತಿರುಚ್ಚಿಯ ಸಾಮಾಜಿಕ ಹೋರಾಟಗಾರರು ಆಕ್ಷೇಪ ಮಾಡಿದ್ದಾರೆ. ಇದರ ಜತೆಗೆ ಅದರಲ್ಲಿ ಹೆತ್ತವರ ಫೋನ್‌ ನಂಬರ್‌, ರಕ್ತದ ಗುಂಪು ಕೂಡ ನೀಡಲಾಗಿದೆ. ತಿರುವಾಂಕೋಯಿಲ್ನಲ್ಲಿ ವಿದ್ಯಾರ್ಥಿಯ ಐ.ಡಿ.ಕಾರ್ಡ್‌ನಲ್ಲಿರುವ ಕೋಡ್‌ ಸ್ಕ್ಯಾನ್‌ ಮಾಡಿದಾಗ ಈ ಅಂಶ ಬಯಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸರ್ವ ಶಿಕ್ಷಾ ಅಭಿಯಾನ ಹೆಚ್ಚುವರಿ ಯೋಜನಾ ನಿರ್ದೇಶಕ ಎನ್‌.ವೆಂಕಟೇಶ್‌ ವಿದ್ಯಾರ್ಥಿಗಳ ಗುರುತಿಗಾಗಿ ಕಾರ್ಡ್‌ ನೀಡಲಾಗಿದೆ ಎಂದಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next