Advertisement

ನಡೆದು ಹೋಗುತಿದ್ದ ವೇಳೆ ಕಾಲುಜಾರಿ ಹಳ್ಳಕ್ಕೆ ಬಿದ್ದು ಯುವಕ ಸಾವು

05:21 PM Sep 29, 2020 | sudhir |

ವಿಜಯಪುರ : ಹಳ್ಳದ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನೊಬ್ಬ ಆಯತಪ್ಪಿ ಹಳ್ಳದ ಗುಂಡಿಗೆ ಬಿದ್ದು ಮೃತಪಟ್ಟ ಘಟನೆ ಜಿಲ್ಲೆಯ ನರಸಲಗಿ ತಾಂಡಾದಲ್ಲಿ ಜರುಗಿದೆ.

Advertisement

ಬಸವನಬಾಗೇವಾಡಿ ತಾಲೂಕಿನ ನರಸಲಗಿ ತಾಂಡಾದ ಯುವಕ ಪಾಂಡು ಧನವಡೆ (24) ಮೃತ ದುರ್ದೈವಿ ಯುವಕ.

ಪಾಂಡು ಹಳ್ಳದ ತಟದಲ್ಲಿ ನಡೆದುಕೊಂಡು ಹೋಗುತ್ತಿರುವ ವೇಳೆ ಆಯತಪ್ಪಿ ಹಳ್ಳದಲ್ಲಿದ್ದ ಗುಂಡಿಗೆ ಬಿದ್ದ ಪಾಂಡು, ಕೂಗಿಕೊಂಡರೂ ಅಕ್ಕಪಕ್ಕದಲ್ಲಿ ಯಾರೂ ಇರದ ಕಾರಣ ರಕ್ಷಣೆಗೆ ಬಾರದೇ ಮೃತಪಟ್ಟಿದ್ದಾನೆ.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿರುವ ಬಸವನಬಾಗೇವಾಡಿ ಠಾಣೆ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

Advertisement

Advertisement

Udayavani is now on Telegram. Click here to join our channel and stay updated with the latest news.

Next