Advertisement

Ramanagar; ವಸತಿ ಶಾಲೆಯಲ್ಲಿ ನೀರಿನ ಸಂಪು ಕುಸಿದು ಬಾಲಕ ಸಾವು

12:31 PM Sep 21, 2023 | Team Udayavani |

ರಾಮನಗರ: ಸಂಪು ಕುಸಿದು ನೀರಿನಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಿಸಲು ಮುಂದಾದ ಮತ್ತೋರ್ವ ಬಾಲಕ ಸಾವನ್ನಪ್ಪಿದ ಘಟನೆ ಹೆಚ್. ಗೊಲ್ಲಹಳ್ಳಿ ಗ್ರಾಮದ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.

Advertisement

ಮೃತ ಬಾಲಕನನ್ನು 12 ವರ್ಷದ ಕೌಶಿಕ್ ಗೌಡ ಎಂದು ಗುರುತಿಸಲಾಗಿದೆ.

ಈತ ರಾಮನಗರ ತಾಲೂಕಿನ ಹೆಚ್.ಗೊಲ್ಲಹಳ್ಳಿ ಗ್ರಾಮದಲ್ಲಿರುವ ಶಾಲೆಯಲ್ಲಿ ಆರನೇ ತರಗತಿ ವಿದ್ಯಾರ್ಥಿ ಓದುತ್ತಿದ್ದ. ಮುಖ ತೊಳೆಯಲು ಹೋದಾಗ ಸಂಪು ಏಕಾಏಕಿ ಕುಸಿದಿದೆ. ಸಂಪನ್ನು ಇತ್ತೀಚೆಗಷ್ಟೇ ಕಟ್ಟಿಸಲಾಗಿತ್ತು ಎಂದು ವರದಿಯಾಗಿದೆ.

 ಇದನ್ನೂ ಓದಿ:Bannerghatta Park: ಬನೇರುಘಟ್ಟದಲ್ಲಿ ಕಿತ್ತಾಡಿಕೊಂಡು 15 ಜಿಂಕೆ ಸಾವನ್ನಪ್ಪಿರುವ ಶಂಕೆ

ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next