Advertisement

ಬಾಲಕನಿಗೆ ಹಾವು ಕಡಿತ: ಔಷಧಿ ಇಲ್ಲವೆಂದ ವೈದ್ಯರು, ಬಾಲಕ ಸಾವು

02:28 PM Jan 18, 2021 | Team Udayavani |

ಮಳವಳ್ಳಿ: ಪಟ್ಟಣದ ಉಗ್ರಾಣಪುರದೊಡ್ಡಿ ಬಳಿ ಹಾವು ಕಚ್ಚಿ ಬಾಲಕ ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ.

Advertisement

ತಾಲ್ಲೂಕಿನ ಕಂದೇಗಾಲ ಗ್ರಾಮದ ನಿವಾಸಿ ಹಾಗೂ ಕಿರುಗಾವಲು ಪಿಎಸಿಎಸ್ ನ ಸಿಇಒ ಶಿವಲಿಂಗು ಪುತ್ರ ಭುವನ್ (9) ಮೃತ ಬಾಲಕ.

ಭಾನುವಾರ ರಾತ್ರಿ ಉಗ್ರಾಣಪುರದೊಡ್ಡಿ ಮನೆಯ ಮುಂದೆ ಮೂತ್ರ ವಿಸರ್ಜನೆಗೆ ಬಂದ ವೇಳೆ ವಿಷಕಾರಿ ಹಾವು ಕಚ್ಚಿದೆ. ತಕ್ಷಣವೇ ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವೈದ್ಯರು ಚಿಕಿತ್ಸೆ ನೀಡಲು ನಮ್ಮ ಬಳಿ ಔಷಧಿ ಇಲ್ಲ ಎಂದಿದ್ದಾರೆ. ನಂತರ ನಾಟಿ ಔಷಧಿ ಕೊಡಿಸಲಾಗಿತ್ತು.

ಇದನ್ನೂ ಓದಿ:ಮಹಾರಾಷ್ಟ್ರದಲ್ಲಿರುವ ಸಾಂಗ್ಲಿ, ಸೊಲ್ಲಾಪುರವನ್ನು ರಾಜ್ಯಕ್ಕೆ ಸೇರಿಸುತ್ತೇವೆ: ಬೊಮ್ಮಾಯಿ

ನಂತರ ಬಾಲಕನ್ನು ಮನೆಗೆ ವಾಪಸ್ ಕರೆದುಕೊಂಡು ಬಂದಿದ್ದಾರೆ. ಸೋಮವಾರ ಬೆಳಗ್ಗೆ ಬಾಲಕನ ಬಾಯಿಯಲ್ಲಿ ನೊರೆ ಬಂದಿದ್ದು, ಕೂಡಲೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next